ಗುಡ್ಡೆಹೊಸೂರು, ಏ. ೨೨: ಸಮೀಪದ ನಂಜರಾಯಪಟ್ಟಣದ ಶ್ರೀ ನಂಜುAಡೇಶ್ವರ ದೇವಸ್ಥಾನದ ವಾರ್ಷಿಕ ಮಹಾಪೂಜೆ ಆರಂಭವಾಗಿದ್ದು, ತಾ. ೨೩ ರಂದು (ಇಂದು) ಇಲ್ಲಿನ ದುಬಾರೆ ಸಮೀಪದ ಪವಿತ್ರ ಕಾವೇರಿ ನದಿಯಲ್ಲಿ ಗಂಗೆ ಪೂಜೆ ನಡೆಸಿ ಶ್ರೀ ದೇವರುಗಳ ಪಲ್ಲಕ್ಕಿ ಮೇರವಣಿಗೆ ನಡೆಯಲಿದೆ. ಶ್ರೀ ಬಸವೇಶ್ವರ ಮತ್ತು ಶ್ರೀ ಕನ್ನಂಬಾಡಿ ಅಮ್ಮ ದೇವರುಗಳ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ

ಮಧ್ಯಾಹ್ನ ೧೨ ಗಂಟೆಗೆ ಕೊಂಡಹಾಯುವ ಕಾರ್ಯಕ್ರಮ ನಡೆಯಲಿದೆ. ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಮತ್ತು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ದಿಂಡುಗಾಡು ಮಠದ ಶ್ರೀ ಅಪ್ಪಾಜಿ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಎಲ್ಲಾ ಪೂಜಾ ಕಾರ್ಯಗಳು ನಡೆಯಲಿವೆ. ಬಳಿಕ ಅನ್ನಸಂತರ್ಪಣೆ, ಕಾರ್ಯ ನಡೆಯಲಿದೆ ಶ್ರೀ ವೀರಭದ್ರ ನೃತ್ಯ ನಡೆಯಲಿದೆ.