ಕುಶಾಲನಗರ, ಮಾ. ೨೭ : ಕುಶಾಲನಗರದಲ್ಲಿ ಪಿಕ್ ಪಾಕೆಟ್ ಚೋರರು ಲಕ್ಷಾಂತರ ರೂಗಳ ಹಣವನ್ನು ಎಗರಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕುಶಾಲನಗರ ಮೂಲಕ ಮಡಿಕೇರಿಗೆ ಸಾಗುವ ವೇಳೆ ಗಣಪತಿ ದೇವಾಲಯ ಮುಂಭಾಗ ಕಾರ್ಯಕರ್ತರು ಸ್ವಾಗತಿಸುವ ಸಂದರ್ಭವನ್ನು ಬಳಕೆ ಮಾಡಿಕೊಂಡ ಕಳ್ಳರು ಕಾರ್ಯಕರ್ತರ ಜೇಬಿನಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ನಗದು ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ.

ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸುಮಾರು ೨೦ ಸಾವಿರ ಹಾಗೂ ಪರ್ಸ್ನಲ್ಲಿ ಇದ್ದ ದಾಖಲೆಗಳು, ಕುಶಾಲನಗರ ಬಿಜೆಪಿ ಪ್ರಮುಖರಾದ ಚರಣ್ ಅವರ ಸುಮಾರು ೩೫ ಸಾವಿರ, ಹೇರೂರು ಚಂದ್ರಶೇಖರ್ ಅವರ ಸುಮಾರು ೪೫ ಸಾವಿರ ಮತ್ತು ಬಿಜೆಪಿ ಕಾರ್ಯಕರ್ತ ಮಣಿ ಅವರ ೧೫ ಸಾವಿರ ನಗದು ಸೇರಿದಂತೆ ಲಕ್ಷಕ್ಕೂ ಅಧಿಕ ಹಣ ಕಳ್ಳರ ಪಾಲಾಗಿದೆ. ಬೆಳಿಗ್ಗೆ ಸುಮಾರು ೧೧.೨೦ ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಲೋಕಸಭಾ ಅಭ್ಯರ್ಥಿ ಯದುವೀರ್ ಅವರುಗಳು ಕುಶಾಲನಗರಕ್ಕೆ ಬಂದ ವೇಳೆ ಬಿಜೆಪಿ ಪ್ರಮುಖರು ಹಾರಾರ್ಪಣೆ ಮಾಡುವ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಸಂದರ್ಭ ಈ ಕೈಚಳಕ ನಡೆದಿರುವ ಬಗ್ಗೆ ಸಂಶಯ ವ್ಯಕ್ತಗೊಂಡಿದೆ. ಮಡಿಕೇರಿಯಲ್ಲಿ ಕೂಡ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರ ಜೇಬಿನಿಂದ ರೂ. ೧೭ ಸಾವಿರ ಹಣ ಲಪಟಾಯಿಸಿದ್ದಾರೆ.

ಈ ಬಗ್ಗೆ ಈಗಾಗಲೇ ಕುಶಾಲನಗರದಲ್ಲಿ ಪೊಲೀಸ್ ದೂರು ನೀಡಲಾಗಿದ್ದು ಪೊಲೀಸರು ಜೇಬುಕಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಕ್ರಮ ಸಂದರ್ಭದಲ್ಲಿ ತೆಗೆದಿರುವ ವಿಡಿಯೋ ತುಣುಕುಗಳು ಮತ್ತು ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಪತ್ತೆ ಕಾರ್ಯ ನಡೆಯುತ್ತಿದೆ. -ಸಿಂಚು