ಮಡಿಕೇರಿ, ಫೆ. ೨೪: ಶ್ರೀರಾಮ ತನ್ನ ಜೀವನದುದ್ದಕ್ಕೂ ಪ್ರತಿಪಾದಿಸುತ್ತಾ ಅನುಸರಿಸುತ್ತಿದ್ದ ಆದರ್ಶ ಮತ್ತು ಪ್ರೀತಿಯ ಅಂಶಗಳೇ ಅವನನ್ನು ಭಾರತ ಮಾತ್ರವಲ್ಲ, ವಿಶ್ವದಾದ್ಯಂತ ಅನೇಕ ದೇಶಗಳು ಆರಾಧಿಸಲು ಕಾರಣವಾಗಿದೆ. ಶ್ರೀರಾಮನನ್ನು ಮನಸ್ಸಿಗೆ ಹಚ್ಚಿಕೊಂಡಲ್ಲಿ ಆತನಲ್ಲಿದ್ದ ಮಾನವ ಗುಣದ ಅನೇಕ ಋಣಾತ್ಮಕತೆಗಳ ಬಗ್ಗೆ ಪ್ರಶ್ನೆ ಮೂಡಬಹುದು. ಆದರೆ ಶ್ರೀರಾಮನನ್ನು ಹೃದಯದಲ್ಲಿ ಇರಿಸಿಕೊಂಡಾಗ ಮಾತ್ರ ಆತನ ಉತ್ತಮ ಗುಣಗಳನ್ನು ಜೀವನದಲ್ಲಿ ಅನುಸರಿಸಲು ಸಾಧ್ಯವಾಗುತ್ತದೆ ಎಂದು ಖ್ಯಾತ ಸಾಹಿತಿ ಡಾ.ಗಜಾನನ ಶರ್ಮ ಪ್ರತಿಪಾದಿಸಿದರು.
ನಗರದ ರೆಡ್ ಬ್ರಿಕ್ಸ್ ಇನ್ನ ಸತ್ಕಾರ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ‘ಶಕ್ತಿ’ಯಲ್ಲಿ ೨೨ ದಿನಗಳು ಬರೆದಿದ್ದ ಅಯೋಧ್ಯೆ ಡೈರಿ ಆಧರಿಸಿದ ‘ಅಯೋಧ್ಯೆ-ಶ್ರೀರಾಮನ ಮಂದಿರ, ಇದು ಪ್ರೀತಿಯ ಮಂದಿರ, ರಾಷ್ಟçಮಂದಿರ’ ಪುಸ್ತಕವನ್ನು ಬಿಡುಗಡೆ ಮಾಡಿ ಗಜಾನನ ಶರ್ಮ ಮಾತನಾಡಿದರು.
ಎಂತಹ ಕಷ್ಟವನ್ನಾದರೂ ನಗುಮೊಗದಿಂದಲೇ ಸ್ವೀಕರಿಸಬೇಕು ಎಂಬ ಗುಣವನ್ನು ಕಲಿಸಿಕೊಟ್ಟವನು ರಘುರಾಮ. ಜಗದೇಕ ಸುಂದರಿಯAತೆ ವೇಷ ಬದಲಿಸಿ ಬಂದ ಶೂರ್ಪಣಖಿ ಹಾಗೂ ಸಿಂಹಾಸನದ ಸೆಳೆತಗಳಿಗೆ ಕೂಡ ಶ್ರೀರಾಮ ಒಳಗಾಗಲಿಲ್ಲ. ಅಶ್ವಮೇಧ ಯಾಗ ಮಾಡುವಾಗ ಎಲ್ಲರೂ ಮತ್ತೊಂದು ಮದುವೆಯಾಗು ಎಂದಾಗಲೂ ಅದನ್ನೊಪ್ಪದೆ ತಾನು ನಂಬಿದ್ದ ಸೀತೆಯ ಪ್ರತಿಮೆಯನ್ನೇ ಪಕ್ಕದಲ್ಲಿರಿಸಿಕೊಂಡವ ರಾಮ. ಆತನ ಕಣ್ಣಿಗೆ ಅಳಿಲಿನ ಸೇವೆ, ಕಡು ಬಡವಿ ಶಬರಿಯ ಭಕ್ತಿಯೂ ಕಂಡಿತ್ತು; ಸೇವಕನಿಗೂ ತನ್ನ ಕುಟುಂಬದಲ್ಲಿ ಸ್ಥಾನ ಕಲ್ಪಿಸಿದ. ರಾಮನ ಬದುಕೇ ಪ್ರೀತಿಯ ಬದುಕಾಗಿತ್ತು. ಇಂತಹ ವ್ಯಕ್ತಿತ್ವವನ್ನು ನಾವು ಗೌರವಿಸಬಾರದೇ’ ಎಂದು ಗಜಾನನ ಶರ್ಮ ಪ್ರಶ್ನಿಸಿದರು.
ತಾವು ಬರೆದ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂಬ ಹಾಡು ಹುಟ್ಟಿದ ಬಗೆಯನ್ನು ಸವಿವರವಾಗಿ ವಿವರಿಸಿದ
(ಮೊದಲ ಪುಟದಿಂದ) ಡಾ.ಗಜಾವನ ಶರ್ಮ, ತನ್ನ ಗುರು ರಾಘವೇಶ್ವರ ಶ್ರೀಗಳ ಬೇಡಿಕೆಯಂತೆ ರಾಮನ ಬಗ್ಗೆ ಹಾಡು ಬರೆಯಲು ಚಿಂತಿಸುತ್ತಿದ್ದಾಗಲೇ ಕೇರಳದಲ್ಲಿ ತಂಪುಪಾನೀಯದ ಜಾಹೀರಾತಿನಲ್ಲಿದ್ದ ದಿಲ್ ಮಾಂಗೇ ಮೋರ್ ಎಂಬ ಸಂದೇಶ ಕಾಣಿಸಿತು. ಇದನ್ನೇ ಸ್ಪೂರ್ತಿಯಾಗಿರಿಸಿಕೊಂಡು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಎಂದು ಬರೆದೆ. ಈ ಹಾಡಿನಲ್ಲಿ ರಾಮನ ಜತೆಗೇ ರಾಮನನ್ನು ನಂಬಿದ್ದ ಎಲ್ಲರ ಗುಣವಿಶೇಷತೆಗಳೂ ಇವೆ. ಸರಳ ಪದಪುಂಜಗಳಲ್ಲಿ ರೂಪಿತಗೊಂಡ ಈ ಹಾಡು ಈ ರೀತಿಯಲ್ಲಿ ವಿಶ್ವವಿಖ್ಯಾತವಾಗುತ್ತದೆ ಎಂದು ನಿರೀಕ್ಷಿಸಿಯೇ ಇರಲಿಲ್ಲ ಎಂದರು. ಈ ಹಾಡು ಬರೆದು ೧೦ ವರ್ಷಗಳೇ ಕಳೆದರೂ ಇಂದಿಗೂ ಅನೇಕರ ಮನಸ್ಸಿನಂತೆ ಜೀವನಕ್ಕೂ ಈ ಹಾಡು ಬಹಳ ಆಪ್ತವಾಗಿರುವುದು ಹಾಡು ಬರೆದ ತನಗೇ ಅಚ್ಚರಿಯನ್ನು ಉಂಟು ಮಾಡಿದೆ ಎಂದು ಗಜಾನನ ಶರ್ಮ ಹೇಳಿದರು. ಅಯೋಧ್ಯೆಗೇ ತೆರಳಿ ಪತ್ರಕರ್ತ ಅನಿಲ್ ಬರೆದ ಅಯೋಧ್ಯೆ ಕೃತಿಯು ಜನರ ಪ್ರೀತಿಯ ಮಂದಿರದAತೆ ಭಾರತೀಯರ ಹೆಮ್ಮೆಯ ರಾಷ್ಟಿçÃಯ ಮಂದಿರವಾಗಿ ಕಂಗೊಳಿಸಿರುವ ಚಿತ್ರಣವನ್ನು ಮನಸ್ಸಿಗೆ ತಟ್ಟುವಂತೆ ಪದಗಳಲ್ಲಿ ತಿಳಿಸಿದೆ ಎಂದೂ ಗಜಾನನ ಶರ್ಮ ಹೆಮ್ಮೆಪಟ್ಟರು.
ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ, ‘ವೀರಪ್ಪನ್ ಇದ್ದಂತ ಸಂದರ್ಭದಲ್ಲಿ, ಕೋವಿಡ್ ಕಾಲದಲ್ಲಿ ಅತ್ಯುತ್ತಮ ವರದಿಗಳನ್ನು ‘ಶಕ್ತಿ’ಯಲ್ಲಿ ಅನಿಲ್ ಎಚ್.ಟಿ. ಬರೆದರು. ಈಗ ಅಯೋಧ್ಯೆ ಪುಸ್ತಕವನ್ನು ಅಷ್ಟೇ ಅತ್ಯುತ್ತಮವಾಗಿ ರಚಿಸಿದ್ದಾರೆ’ ಎಂದು ಶ್ಲಾಘಿಸಿದರು. ಅನಿಲ್ ಬರಹದಲ್ಲಿ ವಿನೂತನ ಶೈಲಿಯಿದೆ. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸ್ವಭಾವವೇ ಅನಿಲ್ ಬರಹಕ್ಕೆ ಸ್ಪೂರ್ತಿಯಾಗಿರು ವುದು ವಿಶೇಷ ಎಂದೂ ಚಿದ್ವಿಲಾಸ್ ಹೇಳಿದರು. ಅನಿಲ್ ಅವರ ಮುತ್ತಜ್ಜ ಡಿ.ಎನ್. ಕೃಷ್ಣಯ್ಯ ಬರೆದಿದ್ದ ಕೊಡಗಿನ ಇತಿಹಾಸ ಕೃತಿ ಅನೇಕ ದಶಕಗಳ ಹಿಂದೆಯೇ ‘ಶಕ್ತಿ’ಯಲ್ಲಿ ಪ್ರತೀ ವಾರ ೧೦ ವರ್ಷಗಳ ಕಾಲ ಪ್ರಕಟವಾಗಿತ್ತು. ಅಜ್ಜನ ಬರಹದ ಅಂಶವನ್ನೇ ಅನಿಲ್ ಹೊಂದಿದ್ದಾರೆ. ಅನಿಲ್ ತಾಯಿ ಆಶಾ ತಿಮ್ಮಪ್ಪಯ್ಯ ಕೂಡ ಕೊಡಗಿನ ಪ್ರಥಮ ಪಾಕಶಾಶ್ತç ಪುಸ್ತಕವನ್ನು ಪ್ರಕಟಗೊಳಿಸಿದ್ದರು ಎಂದೂ ಚಿದ್ವಿಲಾಸ್ ಸ್ಮರಿಸಿಕೊಂಡರು.
ಅಯೋಧ್ಯೆ ಕೃತಿಕಾರ ಅನಿಲ್ ಹೆಚ್.ಟಿ. ಮಾತನಾಡಿ, ಲಾಕ್ ಡೌನ್ ಡೈರಿ ನಂತರದ ತನ್ನ ಕೃತಿ ಅಯೋಧ್ಯೆ ಅನೇಕ ಓದುಗರ ಬೇಡಿಕೆಯನುಸಾರ ಪ್ರಕಟಿತವಾಗಿದೆ. ಅಯೋಧ್ಯೆಗೆ ಅನೇಕ ಬಾರಿ ತೆರಳಿದ್ದರೂ ಈಗ ದೇವನಗರಿಯಲ್ಲಿ ಆಗಿರುವ ಬದಲಾವಣೆ ಊಹೆಗೂ ನಿಲುಕದಂತಿದೆ. ಕೊಡಗಿನ ಜನತೆ ಕೂಡ ೨.೨೦೦ ಕಿಮೀ. ದೂರದ ಅಯೋಧ್ಯೆಯಲ್ಲಿನ ವಿದ್ಯಮಾನಗಳ ಬಗ್ಗೆ ಆಸಕ್ತಿ ವಹಿಸಿದ್ದು ಕೂಡ ಅಯೋಧ್ಯೆ ಪುಸ್ತಕ ಪ್ರಕಟಣೆಗೆ ಕಾರಣವಾಯಿತು ಎಂದು ಮಾಹಿತಿ ನೀಡಿದರು. ಅಯೋಧ್ಯೆಯಲ್ಲಿ ಎಲ್ಲ ಭಾಷೆಯ ಹಾಡುಗಳು ಕೇಳಿ ಬರುತ್ತಿದ್ದವು. ಅದರಲ್ಲಿ ೪ನೇ ಹಾಡಾಗಿ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ಕೇಳಿ ಬಂದು ರೋಮಾಂಚನಕ್ಕೆ ಕಾರಣವಾಯಿತು. ಅಯೋಧ್ಯೆ ಕೃತಿ ಓದಿದ ಬಳಿಕ ದೇವನಗರಿಗೆ ತೆರಳಬೇಕು ಎಂಬ ಭಾವನೆ ಮೂಡಿದರೆ ತನ್ನ ಪ್ರಯತ್ನ ಸಾರ್ಥಕವಾದಂತೆ. ಹಾಗೇ ಅಯೋಧ್ಯೆ ಕೃತಿ ಓದಿ ಇಲ್ಲಿ ಸಂಪೂರ್ಣ ಅಯೋಧ್ಯೆಯ ಚಿತ್ರಣವಿದೆ. ಅಯೋಧ್ಯೆಗೆ ತೆರಳುವುದು ಯಾತಕ್ಕೆ ಎನ್ನಿಸಿದರೂ ತನ್ನ ಶ್ರಮ ಸಾರ್ಥಕವಾದಂತೆ ಎಂದು ಹೇಳಿದರು. ಪ್ರತೀಯೋರ್ವರು ದೈವನಗರದಂತೆ ಕಂಗೊಳಿಸುತ್ತಿರುವ ಅಯೋಧ್ಯೆಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು ಎಂದೂ ಅನಿಲ್ ಮನವಿ ಮಾಡಿದರು.
ಇದೇ ಸಂದರ್ಭ ಸರಿಗಮಪ ರಿಯಾಲಿಟಿ ಶೋನ ಸ್ಪರ್ಧಿ, ಕೊಡಗಿನ ಯುವ ಗಾಯಕ ಅನ್ವಿತ್ ಕುಮಾರ್ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡನ್ನು ಹಾಡು ಬರೆದ ಸಾಹಿತಿ ಮುಂದೆಯೇ ಹಾಡಿದರು. ಲೇಖಕಿ ಕೆ.ಜಯಲಕ್ಷಿö್ಮ ನಿರೂಪಿಸಿದ ಕಾರ್ಯಕ್ರಮದಲ್ಲಿ ಅತಿಥಿಗಳ ಪರಿಚಯವನ್ನು ಪತ್ರಕರ್ತ ಕುಡೆಕಲ್ ಸಂತೋಷ್, ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ಮಾಡಿದರು. ರೀನಾ ಅನಿಲ್, ಎಸ್.ಎಸ್. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಚಿತ್ರಾ ನಂಜಪ್ಪ, ಸಂಧ್ಯಾ ಚಿದ್ವಿಲಾಸ್, ವಂದನಾ ಪೊನ್ನಪ್ಪ ರಾಮಸ್ತುತಿ ಹಾಡಿದರು.
ಸಾಹಿತಿ ಡಾ. ಗಜಾನನ ಶರ್ಮಾ, ನಾಗರತ್ನ ಶರ್ಮಾ ದಂಪತಿಯನ್ನು ಕೊಡಗಿನ ಜನತೆಯ ಪರವಾಗಿ ‘ಶಕ್ತಿ’ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ, ಡಾ.ಎಂ.ಜಿ.ಪಾಟ್ಕರ್, ಎಚ್.ಎಸ್. ತಿಮ್ಮಪ್ಪಯ್ಯ ಸನ್ಮಾನಿಸಿ ಗೌರವಿಸಿದರು. ಲೇಖಕ ಅನಿಲ್ ಎಚ್.ಟಿ. ಅವರನ್ನು ಸಮರ್ಥ ಕನ್ನಡಿಗ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಸಾಹಿತ್ಯ ಸಂಬAಧಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಸಭಿಕರು ಸೇರುವುದಿಲ್ಲ ಎಂಬ ಮಾತಿಗೆ ಅಪವಾದ ಎಂಬAತೆ ಸತ್ಕಾರ ಸಭಾಂಗಣದಲ್ಲಿ ಅಯೋಧ್ಯೆ ಕೃತಿ ಲೋಕಾರ್ಪಣೆ ಸಂದರ್ಭ ನೂರಾರು ಸಾಹಿತ್ಯ ಪ್ರೇಮಿಗಳು ಕಿಕ್ಕಿರಿದು ಸೇರಿದ್ದು ಗಮನಾರ್ಹವಾಗಿತ್ತು. ಸಾಮಾನ್ಯವಾಗಿ ಕವಿತೆಗಳ ಪುಸ್ತಕಕ್ಕೆ ಕವಿತೆಯಲ್ಲಿ ಆಸಕ್ತಿ ಉಳ್ಳವರು, ಸಾಹಿತ್ಯ ಪುಸ್ತಕಕ್ಕೆ ಸಾಹಿತ್ಯದಲ್ಲಿ ಆಸಕ್ತರು ಮಾತ್ರ ಹಾಜರಿರುತ್ತಾರೆ. ಆದರೆ ಅಯೋಧ್ಯೆ ಕೃತಿ ಲೋಕಾರ್ಪಣೆ ಸಂದರ್ಭ ಸಮಾಜದ ಎಲ್ಲಾ ವರ್ಗದ ಸಾಹಿತ್ಯ, ಕಲಾಪ್ರೇಮಿಗಳೂ ಕಿಕ್ಕಿರಿದು ಸೇರಿದ್ದು ವಿಶೇಷವಾಗಿತ್ತು. ಮಡಿಕೇರಿಯಲ್ಲಿ ಸಭಿಕರ ಕೊರತೆ ಇಲ್ಲ ಎಂಬುದಕ್ಕೆ ಈ ಕಾರ್ಯಕ್ರಮ ಉದಾಹರಣೆಯಾಗಿದೆ ಎಂದು ಅತಿಥಿಯಾಗಿದ್ದ ಪತ್ರಕರ್ತ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು.