ಮಡಿಕೇರಿ, ಡಿ. ೩೦: ರಾಜ್ಯದ ಸಾಮಾಜಿಕ, ಆರ್ಥಿಕ, ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆÀ ಒಬ್ಬರಂತೆ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳನ್ನು ತಾಲೂಕು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

ಮಡಿಕೇರಿ ತಾಲೂಕಿಗೆ ಕೊಡಗು ಅಪರ ಜಿಲ್ಲಾಧಿಕಾರಿ ಬಿ.ಎನ್. ವೀಣಾ, ಸೋಮವಾರಪೇಟೆ ತಾಲೂಕಿಗೆ ಬೆಂಗಳೂರು ಬಿಎಂಆರ್‌ಡಿಎ ಅಪರ ಆಯುಕ್ತ ಎನ್.ಎಸ್. ಚಿದಾನಂದ, ಕುಶಾಲನಗರಕ್ಕೆ ಪಿ.ಯು. ಬೋರ್ಡ್ ಜಂಟಿ ನಿರ್ದೇಶಕಿ ಜಿ.ಎನ್. ಶ್ವೇತಾ, ಪೊನ್ನಂಪೇಟೆಗೆ ಬೆಂಗಳೂರು ಕೆಪಿಸಿಎಲ್ ನಿರ್ದೇಶಕ ಸಿ. ನಾಗರಾಜ ಅವರುಗಳನ್ನು ನೇಮಿಸಿ ಸರಕಾರದ ಅಧೀನ ಕಾರ್ಯದರ್ಶಿ ಎನ್. ಕಲ್ಪನ ಆದೇಶಿಸಿದ್ದಾರೆ.