v*ಗೋಣಿಕೊಪ್ಪ, ಡಿ. ೨೭: ಪೊನ್ನಂಪೇಟೆ ಪಂಚಾಯಿತಿ ನಡೆಸಿದ ಮಕ್ಕಳ ಗ್ರಾಮ ಸಭೆಯಲ್ಲಿ ಕುಶಾಲಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಸದಸ್ಯರುಗಳಾದ ರಾಮಕೃಷ್ಣ, ವಿಜಯ್, ಅಣ್ಣೀರ ಹರೀಶ್, ಮೂಕಳೇರ ಮಧು, ಆರತಿ, ವಿಮಲ, ಭಾರತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಪೊನ್ನಂಪೇಟೆ ಕ್ಲಸ್ಟರ್ ಸಮನ್ವಯ ಸಂಪನ್ಮೂಲ ಅಧಿಕಾರಿ ತಿರುನೆಲ್ಲಿಮಾಡ ಜೀವನ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ನಾಗವೇಣಿ, ಮುಖ್ಯ ಶಿಕ್ಷಕ ವಾಸುವಾರ್ಮ, ವಿಜಯ ಪಿ.ಎಸ್. ಪ್ರೌಢಶಾಲಾ ಶಿಕ್ಷಕ ಚಿದಾನಂದ, ಮಹಿಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿ ರೀತಾ ಬಿ.ಎಸ್., ಶಾಲಾ ಶಿಕ್ಷಕರುಗಳಾದ ಝಾನ್ಸಿ, ಎಂ.ಎ. ರೇಖಾ, ಪಿ.ಎ. ಗೀತಾ, ರಮ್ಯ ಸಿ.ಟಿ., ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಟಿ.ಎಸ್., ಅಜಿತ ಕೆ.ಕೆ., ವಿದ್ಯಾರ್ಥಿಗಳು ಇದ್ದರು.