ನಾಪೋಕ್ಲು, ಡಿ. ೫: ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಹಾಕತ್ತೂರು ಸಮೀಪದ ಮುತ್ತಾರುಮುಡಿಯಲ್ಲಿ ನಡೆದಿದೆ.

ಎಮ್ಮೆಮಾಡು ನಿವಾಸಿ ಇಬ್ರಾಯಿಂ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಬಸ್ ನಿರ್ವಾಹಕ ಕಾಂತರಾಜು ಹಾಗೂ ಪ್ರಯಾಣಿಕ ಹೊರರಾಜ್ಯದ ಕಾರ್ಮಿಕ ಜಸ್ಮತ್ತೀನ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಇಂದು ಬೆಳಿಗ್ಗೆ ೧೦.೪೫ರ ಸುಮಾರಿಗೆ ಮಡಿಕೇರಿಯಿಂದ ಗೋಣಿಕೊಪ್ಪ ಕಡೆಗೆ ತೆರಳುತ್ತಿದ್ದ ಚಕ್ರವರ್ತಿ ಬಸ್ ಹಾಗೂ ಎಮ್ಮೆಮಾಡಿನಿಂದ ಮಡಿಕೇರಿ ತೆರಳುತ್ತಿದ್ದ ಹುಂಡೈ ಕಾರಿನ ನಡುವೆ ಅಪಘಾತ ನಡೆದಿದೆ.

ನಿಯಂತ್ರಣ ಕಳೆದುಕೊಂಡ ಕಾರು ಎದುರು ಬರುತ್ತಿದ್ದ ಬಸ್‌ಗೆ ಅಪ್ಪಳಿಸಿದೆ. ಪರಿಣಾಮ ಕಾರು ಚಲಾಯಿಸುತ್ತಿದ್ದ ಇಬ್ರಾಯಿಂಗೆ ಗಂಭೀರ ಪೆಟ್ಟಾಗಿದ್ದು, ತಕ್ಷಣ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಬಸ್ಸಿನ ಮುಂಭಾಗ ಜಖಂಗೊAಡಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲಿಸಿ ಸೆಕ್ಷನ್ ೨೭೯, ೩೩೭ ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. - ದುಗ್ಗಳ