*ಗೋಣಿಕೊಪ್ಪ, ಡ. ೫: ಹೈಸೊಡ್ಲೂರು ಗ್ರಾಮದಲ್ಲಿರುವ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ, ನಿವೇಶನ ಕಲ್ಪಿಸಲು ಆಗ್ರಹಿಸಿ ತಾ. ೬ ರಂದು (ಇಂದು) ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಹೆಚ್.ಎಸ್. ಕೃಷ್ಣಪ್ಪ ತಿಳಿಸಿದ್ದಾರೆ.

೬ ವರ್ಷಗಳಿಂದ ಇಲ್ಲಿ ಶೆಡ್ ಕಟ್ಟಿಕೊಂಡು ಬದುಕುತ್ತಿರುವ ಆದಿವಾಸಿಗಳಿಗೆ ನಿವೇಶನ ಒದಗಿಸುತ್ತಿಲ್ಲ. ಮೂಲಭೂತ ಸೌಕರ್ಯ ಕೂಡ ನೀಡುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಹೋರಾಟ, ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಮಹಾ ಪರಿನಿರ್ವಾಹಣ ದಿನದಂದು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಸಂಚಾಲಕ ರಜಿನಿಕಾಂತ್ ಮಾತನಾಡಿ, ಮತಾಂತರ ಗೊಂಡವರನ್ನು ಸರ್ಕಾರಿ ಸೌಲಭ್ಯದಿಂದ ವಂಚಿತರಾಗುವAತೆ ಮಾಡುತ್ತಿರುವುದು ಕೋಮು ಸಂಘರ್ಷಕ್ಕೆ ಮೂಲವಾಗಲಿದೆ. ಈ ಬಗ್ಗೆ ನಾವು ಕೂಡ ಹೋರಾಟ ಮಾಡಲಿದ್ದೇವೆ. ಇದೊಂದು ಹುನ್ನಾರ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಂಚಾಲಕ ಸತೀಶ್, ಕಾರ್ಯಕರ್ತ ನಾಗೇಶ್, ತಾಲೂಕು ಸಂಚಾಲಕ ಕರ್ಕು ಇದ್ದರು.