ಕೂಡಿಗೆ, ಡಿ. ೪: ಹೆಬ್ಬಾಲೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಟಿ. ಮೋಹನ್, ಉಪಾಧ್ಯಕ್ಷೆಯಾಗಿ ಸರೋಜಮ್ಮ ಅವರು ಅವಿರೋಧವಾಗಿ ಅಯ್ಕೆಗೊಂಡರು.

ಸAಘದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಂದೊAದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆ ಹೆಚ್.ಟಿ. ಮೋಹನ್ ಮತ್ತು ಸರೋಜಮ್ಮ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭ ಹಾಲಿ ನಿರ್ದೇಶಕರುಗಳಾದ ಹೆಚ್.ಟಿ. ನಾರಾಯಣ, ಸೋಮಶೇಖರ್, ಮಣಿಕಠ, ಎಂ.ಎA. ಮಹದೇವದ, ಹೆಚ್.ಆರ್. ಪ್ರದೀಪ್, ಹೆಚ್.ಎನ್. ಮಹದೇವ, ಹೆಚ್.ಜೆ. ರವಿ, ಕೇಶವ ಹಾಜರಿದ್ದರು. ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಇಲಾಖೆ ಅಧಿಕಾರಿ ಸಂದೀಪ್ ನೆರವೇರಿಸಿದರು. ಈ ಸಂದರ್ಭ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಸಂಘದ ಮೇಲ್ವಿಚಾರಕಿ ಗೀತಾ, ವಿನಯಾ, ಮಂಜುನಾಥ, ಸಿಬ್ಬಂದಿ ವರ್ಗದವರು ಹಾಜರಿದ್ದರು.