ಚೆಟ್ಟಳ್ಳಿ, ಡಿ. ೩: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಕೇಂದ್ರೀಯ ತೋಟಗಾರಿಕಾ ಕೇಂದ್ರ ಚೆಟ್ಟಳ್ಳಿಯಲ್ಲಿ ಹಣ್ಣುಗಳ- ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆಯಡಿ ತಾ.೭ರಂದು ಲಿಚಿ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೇಸಾಯ ಕ್ರಮಗಳ ಬಗ್ಗೆ ಕಾರ್ಯಾಗಾರ ಪೂರ್ವಾಹ್ನ ೧೦ ರಿಂದ ಸಂಜೆ ೪ ಗಂಟೆಗೆ ನಡೆಯಲಿದೆ ಎಂದು ಕೇಂದ್ರದ ಮೇಲ್ವಿಚಾರಕ ಡಾ. ರಾಜೇಂದಿರನ್ ತಿಳಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಐಸಿಎರ್, ಐಐಹೆಚ್‌ಆರ್‌ನ ನಿರ್ದೇಶಕ ಡಾ. ಸಂಜಯ್ ಕುಮಾರ್ ಸಿಂಗ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಐಸಿಎಆರ್ - ಎನ್‌ಆರ್‌ಸಿಯ ನುರಿತ ತಜ್ಞರು ಹಾಗೂ ನಿರ್ದೇಶಕ ಡಾ. ಬಿಕಾಸ್ ದಾಸ್, ಅತಿಥಿಗಳಾಗಿ ಯೋಜನಾ ಸಂಯೋಜಕ ಡಾ.ಪ್ರಕಾಶ್ ಪಾಟೀಲ್, ಪ್ರಗತಿಪರ ಕಾಫಿ ಬೆಳೆಗಾರ ಹಾಗೂ ಕಾಫಿ ಮಂಡಳಿಯ ಮಾಜಿ ಅಧ್ಯಕ್ಷ ಬೋಸ್ ಮಂದಣ್ಣ ಭಾಗವಹಿಸಲಿದ್ದಾರೆ.

ಅಂದು ವಸ್ತುಪ್ರದರ್ಶನ, ಕ್ಷೇತ್ರ ಭೇಟಿ, ವಿಜ್ಞಾನಿಗಳ ಸಂವಾದ, ಲಿಚಿಯಲ್ಲಿ ಗರ್ಡಲಿಂಗ್ ತಂತ್ರಜ್ಞಾನದ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಲಿಚಿ ಹಣ್ಣಿಗೆ ಬರುವ ಸಮಸ್ಯೆಗಳ ಬಗ್ಗೆ ಕೇಂದ್ರದ ಹಣ್ಣು ವಿಜ್ಞಾನಿ ಡಾ. ಮುರುಳೀಧÀರ್ ಹಾಗೂ ಯಶಸ್ವಿ ಲಿಚಿ ಬೇಸಾಯಕ್ಕೆ ಬೇಕಾಗುವ ತಾಂತ್ರಿಕತೆಗಳು ಎಂಬ ವಿಷಯದ ಬಗ್ಗೆ ಐಸಿಎಅರ್ - ಎನ್‌ಆರ್‌ಸಿಯ ನುರಿತ ತಜ್ಞರು ಹಾಗೂ ನಿರ್ದೇಶಕ ಡಾ. ಬಿಕಾಸ್ ದಾಸ್ ಬೆಳೆಗಾರರಿಗೆ ತಿಳಿಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: ೭೮೯೨೮೮೨೩೫೧/ ೯೦೦೫೮೪೭೨೮೩ ಅಥವಾ hಣಣಠಿs://ಜಿoಡಿms.gಟe/ಠಿಟಿಕಿioಜಿvu೭ಚಿಚಿಒಃZb೯೯ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.