ಪೊನ್ನಂಪೇಟೆ, ಡಿ.೩ : ಇಡೀ ದೇಶದಲ್ಲೇ ವಿಶಿಷ್ಟ ಸಂಸ್ಕೃತಿ ಹೊಂದಿರುವ ಜನಾಂಗವೆAದು ಕರೆಸಿಕೊಂಡಿರುವ ಕೊಡವರ ಅಸ್ತಿತ್ವದ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಕೊಡವ ಜನಾಂಗದ ಅಸ್ತಿತ್ವ ಉಳಿಯಬೇಕಾದರೆ ಮೊದಲು ಕೊಡವರ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಬೇಕು. ಇದಕ್ಕಾಗಿ ಮುಂದಿನ ತಲೆಮಾರಿನ ಕೊಡವ ಪೀಳಿಗೆ ಗಮನಹರಿಸಬೇಕು ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಕರೆ ನೀಡಿದರು.

ವಿ.ಬಾಡಗದ ಹೈ ಫ್ಲೆöÊಯರ್ಸ್ ಸಂಸ್ಥೆ ವತಿಯಿಂದ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ೨ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈ ಫ್ಲೆöÊಯರ್ಸ್ ಕಪ್-೨೦೨೩ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೊಡವರ ಹಲವು ಹೆಗ್ಗಳಿಕೆಗಳ ಪೈಕಿ ಹಾಕಿ ಕ್ರೀಡೆಯೂ ಒಂದು. ಕೆಲವು ವರ್ಷಗಳ ಹಿಂದೆ ಭಾರತದ ಹಾಕಿ ತಂಡದಲ್ಲಿ ಕೊಡವ ಆಟಗಾರರ ಪ್ರಾಬಲ್ಯವಿತ್ತು. ಇದೀಗ ಕೊಡಗಿನ ಯಾವೊಬ್ಬ ಆಟಗಾರರು ದೇಶದ ಹಾಕಿ ತಂಡದಲ್ಲಿ ಇಲ್ಲದಿರುವುದು ಗಂಭೀರವಾಗಿ ಚಿಂತಿಸಬೇಕಾದ ವಿಷಯವಾಗಿದೆ. ಇಂದು ಕೊಡವರು ಕೇವಲ ಆಸ್ತಿ ಮಾಡಿಡುವ ಕೆಲಸಕ್ಕೆ ಮಾತ್ರ ಆದ್ಯತೆ ನೀಡಬಾರದು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ಆಸ್ತಿಯನ್ನು ಮಾರಾಟ ಮಾಡಿಯಾದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು

ಕೊಡವ ಕೌಟುಂಬಿಕ ಹಾಕಿ ಉತ್ಸವಗಳನ್ನು ಆಯೋಜಿಸಲು ಇನ್ನು ಉಳಿದಿರುವ ಪ್ರತಿ ಕೊಡವ ಕುಟುಂಬಗಳು ಮುಂದೆ ಬರಬೇಕು. ಇದರಿಂದ ಕೊಡವರ ಮನೆತನದ ಹಿರಿಮೆ ಹೆಚ್ಚಾಗುತ್ತದೆ. ಕೇವಲ ಹಾಕಿ ಉತ್ಸವವನ್ನು ಮಾತ್ರ ಮಾಡಿ ಮುಗಿಸಿದರೆ ಸಾಲದು. ಹಾಕಿ ಉತ್ಸವಗಳ ನೆಪದಲ್ಲಿ ಸಮಾಜಮುಖಿ ಚಿಂತನೆಯ ಜನೋಪಯೋಗಿ ಶಾಶ್ವತ ಯೋಜನೆಗಳನ್ನು ರೂಪಿಸುವಂತಾಗಬೇಕು ಎಂದು ಪೊನ್ನಂಪೇಟೆಯಲ್ಲಿ ೨೦೦೭ರಲ್ಲಿ ಕಳ್ಳಿಚಂಡ ಕುಟುಂಬಸ್ಥರು ಹಾಕಿ ಉತ್ಸವ ಆಯೋಜಿಸಿದ ಸಂದರ್ಭದಲ್ಲಿ ಸ್ಥಳೀಯ ಸರ್ಕಾರಿ ವಿದ್ಯಾಲಯದಲ್ಲಿ ಮಾಡಲಾದ ಅಭಿವೃದ್ಧಿ ಯೋಜನೆಗಳನ್ನು ಉದಾರಣೆಯಾಗಿ ಉಲ್ಲೇಖಿಸಿ ಸಲಹೆ ನೀಡಿದ ವಿಷ್ಣು ಕಾರ್ಯಪ್ಪ, ಬಾಳುಗೋಡಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಸಂಕೀರ್ಣದಲ್ಲಿ ಕೊಡವ ಮಕ್ಕಳಿಗಾಗಿ ಸುಸಜ್ಜಿತವಾದ ಕ್ರೀಡಾ ವಸತಿ ನಿಲಯವೊಂದನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಈ ಯೋಜನೆ ಜಾರಿಯಾದರೆ ವಾರ್ಷಿಕವಾಗಿ ಕನಿಷ್ಟ ೧೦೦ ಕ್ರೀಡಾಪಟುಗಳನ್ನು ಹೊರ ತರಬಹುದು ಎಂದು ಅವರು ವಿವರಿಸಿದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಪಿ. ಸುಜಾ ಕುಶಾಲಪ್ಪ ಮಾತನಾಡಿ, ಕೊಡಗು ಚಿಕ್ಕ ಜಿಲ್ಲೆಯಾದರು ರಾಜ್ಯದ ಬೇರೆಲ್ಲಾ ಜಿಲ್ಲೆಗಳಿಗಿಂತ ಹೆಚ್ಚು ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ. ಆದರೆ ಇದೀಗ ಕೊಡಗಿನಿಂದ ನಿರೀಕ್ಷಿತ ಮಟ್ಟದ ಕ್ರೀಡಾಪಟುಗಳು ತಯಾರಾಗುತ್ತಿಲ್ಲ. ಕ್ರೀಡೆಯನ್ನು ಕೇವಲ ಬಹುಮಾನ ಪಡೆಯುವುದಕ್ಕೆ ಮಾತ್ರ ಸೀಮಿತಪಡಿಸಬಾರದು. ದೈಹಿಕ ಸದೃಢತೆಯೊಂದಿಗೆ ಭವಿಷ್ಯವನ್ನು ಕೂಡ ರೂಪಿಸಬಹುದಾದ ಕ್ರೀಡೆಯನ್ನು ನಿರ್ಲಕ್ಷತೆಯಿಂದ ನೋಡುವಂತಾಗಬಾರದು ಎಂದು ಕರೆ ನೀಡಿದರಲ್ಲದೆ, ಮುಂಬರುವ ಕೊಡವ ಕೌಟುಂಬಿಕ ಹಾಕಿ ಉತ್ಸವಗಳು ಬಾಳುಗೋಡಿನ ಕ್ರೀಡಾಂಗಣದಲ್ಲಿ ಶಾಶ್ವತವಾಗಿ ಆಯೋಜಿಸಲು ರೂಪುರೇಷೆ ಸಿದ್ದಗೊಳ್ಳಬೇಕಿದೆ. ಇದರಿಂದ ಆತಿಥ್ಯ ವಹಿಸುವ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕುಂಡಿಯೋಳAಡ ಹಾಕಿ ಉತ್ಸವ-೨೦೨೪ರ ಆಯೋಜನಾ ಸಮಿತಿಯ ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿದರು. ವಿ.ಬಾಡಗ ಹೈ ಫ್ಲೆöÊಯರ್ಸ್ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿ.ಬಾಡಗ ಹೈ ಫ್ಲೆöÊಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಮಾದಂಡ ಎಸ್. ಪೂವಯ್ಯ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್, ನಾಡ್ ತಕ್ಕ ಮಳವಂಡ ಭುವೇಶ್, ಕಾಫಿ ಬೆಳೆಗಾರರಾದ ಚೇಮಿರ ಸದಾ ರಾಮಚ್ಚ, ಮಳವಂಡ ಬೋಜಮ್ಮ ಅಚ್ಚಪ್ಪ, ಚೇಮಿರ ಜಿ. ಪೂವಯ್ಯ, ಕೊಂಗAಡ ಕಾಶಿ ಕಾರ್ಯಪ್ಪ, ವಿ ಬಾಡಗ ಹೈ ಫ್ಲೆöÊಯರ್ಸ್ ಸಂಸ್ಥೆ ಉಪಾಧ್ಯಕ್ಷ ಚೇಮಿರ ನಂದಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಅಂತರರಾಷ್ಟಿçÃಯ ರಗ್ಬಿ ಆಟಗಾರರಾದ ಮಾದಂಡ ಪಿ.ತಿಮಯ್ಯ, ಅಂತರರಾಷ್ಟಿçÃಯ ಹಾಕಿ ಆಟಗಾರ ಒಲಂಪಿಯನ್ ಚೇಂದAಡ ನಿಕ್ಕಿನ್ ತಿಮ್ಮಯ್ಯ, ಉದಯೋನ್ಮುಕ ಅಥ್ಲೆಟಿಕ್ ತಾರೆ ಬೊಳ್ಳಂಡ ಉನ್ನತಿ ಅಯ್ಯಪ್ಪ ಮತ್ತು ಗಾಯಕ ಕೊಟ್ರಂಡ ಶ್ರೀಕಾಂತ್ ಪೂವಣ್ಣ ಅವರನ್ನು ಹೈ ಫ್ಲೆöÊಯರ್ಸ್ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಫೈನಲ್ ಪಂದ್ಯಕ್ಕೆ ಮುನ್ನ ಆಟಗಾರರನ್ನು ಮತ್ತು ಅತಿಥಿಗಳನ್ನು ಯರವರ ಸಾಂಪ್ರದಾಯಿಕ ಚೀನಿ ದುಡಿ ವಾದ್ಯದೊಂದಿಗೆ ಮೈದಾನಕ್ಕೆ ಕರೆದುಕೊಂಡು ಬರಲಾಯಿತು. ಬಳಿಕ ಅತಿಥಿಗಳು ಎರಡೂ ತಂಡದ ಆಟಗಾರರನ್ನು ಪರಿಚಯಿಸುವುದರ ಮೂಲಕ ಫೈನಲ್ಸ್ ಪಂದ್ಯಕ್ಕೆ ಚಾಲನೆ ನೀಡಿದರು.

ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಅಮ್ಮಣಿಚಂಡ ರೋಹಿತ್ ಸ್ವಾಗತಿಸಿದರು. ಮಾಳೆಟೀರ ಶ್ರೀನಿವಾಸ್ ಕಾರ್ಯಕ್ರಮ ನಿರ್ವಹಿಸಿದರೆ, ತೀತಿಮಾಡ ಸೋಮಣ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ವಿ. ಬಾಡಗ ಜಿ.ಎಚ್.ಪಿ.ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಸಮೂಹ ನೃತ್ಯ, ಸ್ಥಳೀಯ ಪೊವ್ವದಿ ಮಹಿಳಾ ಸಂಘದ ವತಿಯಿಂದ ಕೊಡವ ಕೋಲಾಟ ಮತ್ತು ಶ್ರೀಮಂಗಲ ಕೊಡವ ಸಮಾಜ ತಂಡದಿAದ ಕತ್ತಿಯಾಟ್ ಪ್ರದರ್ಶನ ಜರುಗಿತು. ಪಂದ್ಯಾವಳಿಯ ಫೈನಲ್ಸ್ ಅಂಗವಾಗಿ ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವಿ.ಬಾಡಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. -ರಫೀಕ್ ತೂಚಮಕೇರಿ