ಚೆಯ್ಯಂಡಾಣೆ, ನ. ೨೪: ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ಆಯೋಜಿಸಿರುವ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟದಲ್ಲಿ ಬಾವಲಿ ಹಾಗೂ ಕೊಕೇರಿ ತಂಡ ಫೈನಲ್ ಹಂತಕ್ಕೆ ತಲುಪಿದೆ.
ಮೊದಲ ಪಂದ್ಯಾಟವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಹಾಗೂ ಚೆನಿಯಪಂಡ ಗಣಪತಿ ಎರಡನೇ ಪಂದ್ಯಾಟವನ್ನು ಕೋರ್ ಆಫ್ ಸಿಗ್ನೆಲ್ಸ್, ಆರ್ಮಿ ಸರ್ವಿಸೆಸ್ ತಂಡದಲ್ಲಿ ಹಾಗೂ ಭಾರತೀಯ ಹಾಕಿ ಶಿಬಿರದಲ್ಲಿ ಭಾಗವಹಿಸಿದ ಕರಿನೆರವಂಡ ದರ ತಮ್ಮಯ್ಯ ಉದ್ಘಾಟಿಸಿದರು.
ಮೊದಲ ಸೆಮಿಫೈನಲ್ ಪಂದ್ಯವನ್ನು ಕರಡ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಾದ ಮನೋಹರ್ ಶರ್ಮ ಹಾಗೂ ಬೊಳ್ಳಚೆಟ್ಟಿರ ಪ್ರಕಾಶ್ ಉದ್ಘಾಟಿಸಿದರು. ೨ನೇ ಸೆಮಿಫೈನಲ್ ಪಂದ್ಯವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾ.ಪಂ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಬೊಳ್ಳಚೆಟ್ಟಿರ ಸುರೇಶ್, ಪಾಂಡAಡ ಮೊಣ್ಣಪ್ಪ ಉದ್ಘಾಟಿಸಿದರು. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಕೊಕೇರಿ ಬಿರುಸಿನ ಪ್ರದರ್ಶನ ನೀಡಿ ಕೈಕಾಡು ತಂಡವನ್ನು ೬-೧ ಗೋಲು ಗಳಿಂದ ಸೋಲಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.
ಕೊಕೇರಿ ತಂಡದ ಫಹದ್ ವಯಕೋಲ್ ಮೊದಲ ಗೋಲ್ ಹೋಡೆದರೆ, ಯಶ್ವಂತ್ ೨, ಲೋಕೇಶ್ ೧, ಪೂವಣ್ಣ೧, ಚಂಗಪ್ಪ ೧ ಗೋಲು ಹೊಡೆದರು. ಕೈಕಾಡು ತಂಡದ ಹರ್ಷ ೧ಗೋಲು ಹೊಡೆದು ಗೋಲಿನ ಅಂತರ ತಗ್ಗಿಸಿದರು. ಎರಡನೇ ಪಂದ್ಯದಲ್ಲಿ ಮಹಾದೇವ ಸ್ಪೋರ್ಟ್ಸ್ ಕ್ಲಬ್ ಬಲಂಬೇರಿ ತಂಡ ಪಾಲಂಗಾಲ ತಂಡವನ್ನು ೩-೧ ಗೋಲುಗಳಿಂದ ಸೋಲಿಸಿ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿತು. ಮಹಾದೇವ ಸ್ಪೋರ್ಟ್ಸ್ ಕ್ಲಬ್ ಬಲಂಬೇರಿ ತಂಡದ ತರುಣ್, ಅಪ್ಪಚ್ಚು, ಬೆಳ್ಳಿಯಪ್ಪ ತಲಾ ಒಂದು ಗೋಲು ಹೊಡೆದರೆ ಪಾಲಂಗಾಲ ತಂಡದ ಕರಿನೆರವಂಡ ವಸಂತ್ ಒಂದು ಗೋಲು ಹೊಡೆದರು. ಸೆಮಿಫೈನಲ್ನಲ್ಲಿ ಬಾವಲಿ ತಂಡ ಕಿರುಂದಾಡು ತಂಡವನ್ನು ೩-೨ ಗೋಲುಗಳಿಂದ ಸೋಲಿಸಿ ಫೈನಲ್ಗೆ ಅರ್ಹತೆ ಪಡೆಯಿತು. ಕುತೂಹಲ ಮೂಡಿದ ಪಂದ್ಯದಲ್ಲಿ ೨-೨ ಗೋಲುಗಳಿಂದ ಸಮಬಲದ ಹೋರಾಟ ಮಾಡಿ ಕಡೆಯ ೩ ನಿಮಿಷದಲ್ಲಿ ಬಾವಲಿ ತಂಡ ಗೋಲು ಗಳಿಸುವುದರ ಮೂಲಕ ಫೈನಲ್ಗೆ ಲಗ್ಗೆ ಇಟ್ಟಿತು.
ಬಾವಲಿ ತಂಡದ ಸುಗನ್, ಕಾರ್ಯಪ್ಪ, ಪ್ರಜ್ವಲ್ ಹಾಗೂ ಕಿರುಂದಾಡು ತಂಡದ ಕಾಳಪ್ಪ ಹಾಗೂ ಹೇಮಂತ್ ತಲಾ ಒಂದು ಗೋಲು ಗಳಿಸಿದರು.
೨ನೇ ಸೆಮಿಫೈನಲ್ ಪಂದ್ಯದಲ್ಲಿ
ಕೊಕೇರಿ ತಂಡ ಮಹಾದೇವಾ ಸ್ಪೋರ್ಟ್ಸ್ ಕ್ಲಬ್ ಬಲಂಬೇರಿ ತಂಡವನ್ನು ೩-೨ ಗೋಲಿನಿಂದ ಸೋಲಿಸಿ ಫೈನಲ್ಗೆ ಅರ್ಹತೆ ಪಡೆಯಿತು. ಪ್ರಥಮಾರ್ದದಲ್ಲಿ ಯಾವುದೇ ಗೋಲುಗಳಿಸಲಿಲ್ಲ ದ್ವಿತೀಯಾರ್ದದಲ್ಲಿ ಕೊಕೇರಿ ತಂಡದ ಅತಿಥಿ ಆಟಗಾರ ಯಶ್ವಂತ್ ೨ ಗೋಲು ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ತೀರ್ಪುಗಾರರಾಗಿ ಚೆಯ್ಯಂಡ ಲವ ಅಪ್ಪಚ್ಚು, ಚೋಯಮಾಡಂಡ ಚಂಗಪ್ಪ, ಚಂದಪAಡ ಆಕಾಶ್, ಅಂಜಪರವAಡ ಕುಶಾಲಪ್ಪ, ನೆಲ್ಲಮಕ್ಕಡ ಪವನ್ ಕಾರ್ಯ ನಿರ್ವಹಿಸಿದರೆ ವೀಕ್ಷಕ ವಿವರಣೆಯನ್ನು ಚೆಪ್ಪುಡೀರ ಕಾರ್ಯಪ್ಪ ಹಾಗೂ ನೆರಪಂಡ ಹರ್ಷ ಮಂದಣ್ಣ, ಚೇನಂಡ ಸಂಪತ್ ನೀಡಿದರು.
ತಾ. ೨೫ ರ ಇಂದಿನ ಫೈನಲ್ ಪಂದ್ಯ
ಒಟ್ಟು ೯ ಪರಾಜಿತ ತಂಡಕ್ಕೆ ಐತಿಚಂಡ ಪ್ರಕಾಶ್ ಕಾರ್ಯಪ್ಪ ಟೈಸನ್ ಕೋಳಿ ಹಾಗೂ ಒಂದು ಕುಪ್ಪಿ (ಮದ್ಯ) ಬಾಟಲಿ ನೀಡಿದ್ದು ಇಲ್ಲಿ ವಿಶೇಷ ವಾಗಿತ್ತು ಇದು ಕೊಡಗಿನಲ್ಲಿ ಮೊದಲ ಬಾರಿ ನಡೆಯುತ್ತಿದ್ದು ಇದಕ್ಕೂ ಮೊದಲು ಬಿಹಾರದ ಒಂದು ಗ್ರಾಮದಲ್ಲಿ ಕುರಿಯನ್ನು ಗೆದ್ದ ತಂಡಕ್ಕೆ ಬಹುಮಾನವಾಗಿ ನೀಡಲಾಗುತಿತ್ತು ಎಂಬುದಾಗಿತ್ತು.
ಸಮಾರೋಪ ಸಮಾರಂಭ
ಫೈನಲ್ ಪಂದ್ಯಾಟ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ಕೊಡವ ಕಲ್ಚರಲ್ ರಿಕ್ರಿಯೇಷನ್ ಕ್ಲಬ್ನ ಅಧ್ಯಕ್ಷ ಬೇಪುಡಿಯಂಡ ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಮೇದುರ ಗಣು ಕುಶಾಲಪ್ಪ, ಬ್ರಿಗೇಡಿಯರ್ ಪಟ್ರಪಂಡ ಮೊಣ್ಣಪ್ಪ ಕೊಟ್ಟೋಳಿ, ರೀನಾ ಸುವರ್ಣ ಎಸಿಪಿ ಬೆಂಗಳೂರು, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಸುದು ಬೋಪ್ಪಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.