ಗೋಣಿಕೊಪ್ಪಲು, ನ.೫: ಗೋಣಿಕೊಪ್ಪಲುವಿನ ಮಾಜಿ ಪುರಸಭಾ ಅಧ್ಯಕ್ಷರಾಗಿದ್ದ, ಬುಟ್ಟಿಯಂಡ ಅಪ್ಪಾಜಿ (೧೦೨) ನಿಧನರಾಗಿದ್ದಾರೆ. ಸ್ವಾತಂತ್ರö್ಯ ಹೋರಾಟ ಸಂದರ್ಭದ ೧೯೩೪ರಲ್ಲಿ ಪೊನ್ನಂಪೇಟೆ ಮತ್ತು ಹುದಿಕೇರಿಗೆ ಗಾಂಧೀಜಿ ಬಂದಿದ್ದಾಗ ತಲೆ ಮೇಲೆ ಕೈ ಇಟ್ಟು ಶತಾಯಿಷಿಯಾಗು ಎಂದು ಹಾರೈಸಿದ್ದರು ಎಂಬ ಸಂಭ್ರಮದಲ್ಲಿ ೧೦೨ ವರ್ಷಗಳ ತುಂಬು ಜೀವನವನ್ನು ನಡೆಸಿದರು. ಇವರ ಅಂತ್ಯಕ್ರಿಯೆ ಭಾನುವಾರ ಬಿಟ್ಟಂಗಾಲ ಗ್ರಾಮದಲ್ಲಿ ನಡೆಯಿತು.

ಶತಾಯುಷಿಯಾಗಿದ್ದ ಅಪ್ಪಾಜಿಯವರು ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೊದಲ ಬಾರಿಗೆ ಗೋಣಿಕೊಪ್ಪಲುವಿನಲ್ಲಿ ಸಿನಿಮಾ ಥಿಯೇಟರ್ ಪ್ರಾರಂಭಿಸಿದ್ದರು ಹಾಗೂ ಪ್ರಭಾತ್ ಪ್ರಿಂರ‍್ಸ್ ಸ್ಥಾಪಿಸಿದ್ದರು.

ಮೃತರು ಪುತ್ರರಾದ ಅಂತರರಾಷ್ಟಿçÃಯ ಮಾಜಿ ಹಾಕಿ ಆಟಗಾರರಾದ ಬುಟ್ಟಿಯಂಡ ಚಂಗಪ್ಪ, ಚಿಣ್ಣಪ್ಪ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.