ಗೋಣಿಕೊಪ್ಪ ವರದಿ, ನ. ೩: ಮುಳಿಯ ಪ್ರತಿಷ್ಠಾನ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಆಯೋಜಿಸಿದ್ದ ಶ್ರೀ ಕೃಷ್ಣ ಛದ್ಮವೇಷ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

೩ ವಯೋಮಿತಿ ಮಕ್ಕಳಿಗೆ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಶ್ರಿಯಾ ಎಸ್. ಶೆಟ್ಟಿ (ಪ್ರ), ವೈಭವ್ (ದ್ವಿ), ಎಸ್.ಎನ್. ಚಿರಂತ್ (ತೃ), ೭ ವರ್ಷ ವಯೋಮಿತಿಯವರಿಗೆ ನಡೆದ ಬಾಲಕೃಷ್ಣ ಸ್ಪರ್ಧೆಯಲ್ಲಿ ಸ್ಮೃತಿ ಎಸ್. ಭರ‍್ವಜ್ (ಪ್ರ), ಬಿ.ಜೆ. ಲೀಕ್ಷಾ ರೈ (ದ್ವಿ), ಪಿ. ಮಯಂಕ್ (ತೃ), ೧೨ ವಯೋಮಿತಿಯವರಿಗೆ ನಡೆದ ರಾಧಾಕೃಷ್ಣ ಸ್ಪರ್ಧೆಯಲ್ಲಿ ಸಿ.ಹೆಚ್. ದಿಶಿಕಾ-ಟಿ.ಹೆಚ್. ತನಿಷ್ಕಾ ಜೋಡಿ (ಪ್ರ), ಎಸ್.ಎಸ್. ಭುವನ-ಸಿ. ಸಮನ್ವಿತಾ ಜೋಡಿ (ದ್ವಿ), ಕೆ.ಎ. ಪ್ರೇಕ್ಷಾ-ಗನಶ್ಯಾಮ್ ಜೋಡಿ ತೃತೀಯ ಸ್ಥಾನ ಪಡೆದರು.

ಕಲಾವಿದೆ ಪುತ್ತಾಮನೆ ವಿದ್ಯಾ ಜಗದೀಶ್ ಹಾಡುಗಾರಿಕೆ ಮೂಲಕ ರಂಜಿಸಿದರು. ಶಿಕ್ಷಕಿ ಬೆಂಜಾAಡ ರಶ್ಮಿ ದೇವಯ್ಯ, ಮಾರುಕಟ್ಟೆ ಸಲಹೆಗಾರ ವೇಣುಶರ್ಮ, ವ್ಯವಸ್ಥಾಪಕ ಬಿ.ಎಸ್. ಕಿಶೋರ್, ಸಂಜೀವ ಇದ್ದರು.