ಮಡಿಕೇರಿ, ಅ. ೧೮: ಪೊನ್ನಂಪೇಟೆ ತಾಲೂಕು ಕುಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ೫ ವರ್ಷದ ಅವಧಿಗೆ ಆಡಳಿತ ಮಂಡಳಿ ಚುನಾವಣೆ ನಡೆಯಿತು. ಸುಬ್ರಮಣಿ ಬಿ. ಮಚ್ಚಮಾಡ ಸತತವಾಗಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪಾರ್ಥ ಡಿ. ಚೆಪ್ಪುಡಿರ ಉಪಾಧ್ಯಕ್ಷರಾಗಿ ಆಯ್ಕೆಯಾದರು. ನಿರ್ದೇಶಕರುಗಳಾಗಿ ರಮೇಶ್ ಎಂ. ಹೊಟ್ಟೇಂಗಡ, ರವಿ ಟಿ. ದುಗ್ಗಂಡ, ಕುಶಾಲಪ್ಪ ಕೆ. ತೀತಿರ, ದೇವಯ್ಯ ಕೆ. ಕೊಂಗAಡ, ದೇವಯ್ಯ ಪಿ. ಕಟ್ಟೇರ, ರಂಜನ್ ಎನ್. ಬೊಜ್ಜಂಗಡ, ಕರುಂಬಯ್ಯ ಬಿ. ಪಟ್ರಪಂಡ, ನಳಿನಿ ಕಾವೇರಮ್ಮ ಆರ್. ಕೋಟ್ರಮಾಡ, ರುಕ್ಮಿಣಿ ಎನ್. ತೀತಿರ, ಚಿನ್ನತಂಬಿ ಕೆ. ಹಾಗೂ ಚಂದ್ರಶೇಖರ ಕೆ. ಬೆಟ್ಟಕುರುಬರ ಇವರುಗಳು ಆಯ್ಕೆಗೊಂಡರು. ಸಂಘದ ಚುನಾವಣೆಯನ್ನು ಕುಟ್ಟ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಎಸ್. ಅನಿಲ್‌ಕುಮಾರ್ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದರು.