ಮಡಿಕೇರಿ, ಸೆ. ೨೬: ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನ ಸಹಯೋಗದಲ್ಲಿ ನಾಪೋಕ್ಲು ಕೊಡವ ಸಮಾಜದಲ್ಲಿ ಸಂತೋಷಕೂಟ ಕಾರ್ಯಕ್ರಮ ನಡೆಯಿತು.

ಪೊಮ್ಮಕ್ಕಡ ಪರಿಷತ್ತಿನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ ಪೊಮ್ಮಕ್ಕಡ ಪರಿಷತ್‌ನವರು ಹಮ್ಮಿಕೊಂಡು ಬರುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ತಾವು ಓದಿದ ಶಾಲೆಯ ಗುರುಗಳನ್ನು ನೆನೆದು ಭಾವುಕರಾದರು. ‘ಪೊಮ್ಮಕ್ಕಡ ಬೊಳ್ಚೆಲ್ ಒಡಿಯಂಡ ಮಹತ್ವ’ ಎಂಬ ವಿಷಯದಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ವಿಚಾರ ಮಂಡನೆ ಮಾಡಿದರು. ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ ನಾಣಯ್ಯ, ನಾಪೋಕ್ಲು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಮೆಡಿಕಲ್ ಕಾಲೇಜು ನಿವೃತ್ತ ಮುಖ್ಯ ಆಡಳಿತಾಧಿಕಾರಿ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಪರಿಷತ್ತಿನ ಖಜಾಂಚಿ ಮೂವೇರ ಧರಣಿ ಗಣಪತಿ, ಉಪಾಧ್ಯಕ್ಷೆ ಮಳುವಂಡ ಪೂವಿ ಮುತ್ತಪ್ಪ ಸೇರಿದಂತೆ ಪರಿಷತ್ತಿನ ನಿರ್ದೇಶಕರು ಹಾಜರಿದ್ದರು. ಆಶುಭಾಷಣ ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಗೆದ್ದವರಿಗೆ ಬಹುಮಾನ ವಿತರಿಸಿದರು. ಅಂಕುರ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪರಿಷತ್‌ನ ನಿರ್ದೇಶಕಿ ನಾಪೋಕ್ಲು ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಸ್ವಾಗತಿಸಿ, ಕೇಲೇಟಿರ ದಿವ್ಯ ರತ್ನ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಮಂಡೇಪAಡ ಗೀತಾ ಮಂದಣ್ಣ ವಂದಿಸಿದರು.