ಸೋಮವಾರಪೇಟೆ, ಸೆ. ೨೫: ಇಲ್ಲಿನ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಸುಮಾ ಸುದೀಪ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಅಭಿವೃದ್ಧಿ ಬಗ್ಗೆ ಸದಸ್ಯರು ಹಲವಾರು ಸಲಹೆಗಳನ್ನು ನೀಡಿದರು. ಸಂಘಕ್ಕೆ ೭೫ ವರ್ಷಗಳು ತುಂಬಿರುವುದರಿAದ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡಲು ಸಭೆ ತೀರ್ಮಾನಿಸಿತು. ಎರಡು ದಿನಗಳ ಕಾಲ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡುವಂತೆ ಸಭೆ ತೀರ್ಮಾನಿಸಿತು.

ಸಂಘದ ಸದಸ್ಯರು ಹೆಚ್ಚಿನ ಸಹಕಾರ ನೀಡಿದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಎಲ್ಲ ಸದಸ್ಯರು ಸಹಕಾರ ನೀಡಬೇಕೆಂದು ಅಧ್ಯಕ್ಷರು ಮನವಿ ಮಾಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಜಲಜಾ ಶೇಖರ್, ಪ್ರಾಧಾನ ಕಾರ್ಯದರ್ಶಿ ಲೀಲಾ ನಿರ್ವಾಣಿ, ಗೌರವ ಕಾರ್ಯದರ್ಶಿ ಗಾಯತ್ರಿ ನಾಗರಾಜ್, ನಿರ್ದೇಶಕರಾದ ಗೀತಾ ರಾಜು, ವಿಜಯಲಕ್ಷಿö್ಮÃ ಸುರೇಶ್, ಜ್ಯೋತಿ ಶುಭಾಕರ, ವರಲಕ್ಷಿö್ಮÃ ಸಿದ್ಧೇಶ್ವರ್, ಅಮಿತಾ ಪ್ರದೀಪ್, ದಾಕ್ಷಾಯಣಮ್ಮ ಶಿವಾನಂದ ಹಾಗೂ ಶೈಲಾ ವಸಂತ್ ಇದ್ದರು.