ಸುಂಟಿಕೊಪ್ಪ, ಸೆ. ೧೭: ಮೊಗೇರ ಸೇವಾ ಸಮಾಜದ ಸದಸ್ಯರುಗಳು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕಲ್ಪಿಸಿ ಕೊಡುವುದರ ಮೂಲಕ ಸಮಾಜ ಬಲಿಷ್ಠವಾಗಲು ಸಹಕರಿಸಬೇಕು ಎಂದು ಕೊಡಗು ಜಿಲ್ಲಾ ಮೊಗೇರ ಸಮಾಜದ ಸ್ಥಾಪಕ ಅಧ್ಯಕ್ಷ ನಿವೃತ್ತ ಶಿಕ್ಷಕ ಟಿ. ಸದಾನಂದ ಕರೆ ನೀಡಿದರು.

ಸುಂಟಿಕೊಪ್ಪದ ಗುಂಡುಗುಟ್ಟಿ ಶ್ರೀ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಮೊಗೇರ ಗ್ರಾಮ ವಿಕಾಸ ಯೋಜ ನೆಯ ಪ್ರಥಮ ವರ್ಷದ ವಾರ್ಷಿ ಕೋತ್ಸವವನ್ನು ಉದ್ಘಾಟಿಸಿ ಮಾತನಾ ಡಿದ ಅವರು, ೨೦ ವರ್ಷಗಳ ಹಿಂದೆ ಕೊಡಗಿನಲ್ಲಿ ಮೊಗೇರ ಸಮಾಜ ಸ್ಥಾಪಿಸುವಾಗ ಆನೇಕ ಎಡರು ತೊಡರುಗಳು ಇದ್ದವು, ಆಗ ಗ್ರಾಮ ಪಂಚಾಯಿತಿ, ತಾ.ಪಂ, ಜಿ.ಪಂ.ನಲ್ಲೂ ಒಬ್ಬರೇ ಒಬ್ಬರು ಸಮಾಜದ ಸದಸ್ಯರುಗಳು ಇರಲಿಲ್ಲ. ಆನಂತರ ಸಂಘಟನೆ ಬಲವಾದಂತೆ ಹಲವಾರು ಮಂದಿ ಗ್ರಾ.ಪಂ., ತಾ.ಪಂ, ಜಿ.ಪಂ. ಸದ ಸ್ಯರು, ಅಧ್ಯಕ್ಷರೂ ಆದರು ಎಂದರು.

ಮುಖ್ಯ ಅತಿಥಿ ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಪಿ.ಬಿ. ಜನಾ ರ್ಧನ ಮಾತನಾಡಿ, ೨೦ ವರ್ಷದ ಪರಿಶ್ರಮದ ಫಲವಾಗಿ ಮೊಗೇರ ಸಮಾಜ ಸಂಘಟನಾತ್ಮಕವಾಗಿ ಬೆಳೆಯುತ್ತಾ ಬರುತ್ತಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಆರೋಗ್ಯ ಹಾಗೂ ಸೂರು ನೀಡುವತ್ತ ಮೊಗೇರ ಗ್ರಾಮ ವಿಕಾಸ ಯೋಜನೆ ಗಮನ ಹರಿಸಬೇಕೆಂದರು.

ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ. ರವಿ, ಮೊಗೇರ ಸಮುದಾಯದವರು ಕೊಡಗಿನಲ್ಲಿ ೩೫,೦೦೦ ಮಂದಿ ನೆಲೆಸಿದ್ದಾರೆ. ಅವರ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮಾಜಿ ಜಿ.ಪಂ. ಅಧ್ಯಕ್ಷರೂ ರಾಜ್ಯ ಮೊಗೇರ ಸಮಾಜದ ಉಪಾಧ್ಯಕ್ಷರಾದ ಬಿ.ಶಿವಪ್ಪ ಸಮಾಜದ ಅಭಿವೃದ್ಧಿಗೆ ಗ್ರಾಮ ವಿಕಾಸ ಯೋಜನೆ ಸ್ಥಾಪಿಸಲಾಗಿದೆ ಎಂದರು.

ಮೊಗೇರ ಗ್ರಾಮ ವಿಕಾಸ ಯೋಜನೆಯಿಂದ ಮೊಗೇರ ಸೌಹಾರ್ದ ಸಹಕಾರ ಸಂಘ ಸ್ಥಾಪಿ ಸುವ ಗುರಿ ಇದೆ ಎಂದು ಸಂಚಾಲಕ ಸುರೇಶ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಮೊಗೇರ ಗ್ರಾಮ ವಿಕಾಸ ಯೋಜನೆ ಅಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿದರು.

ಬಿ.ಶಿವಪ್ಪ ಮೊಗೇರ ಗ್ರಾಮ ವಿಕಾಸ ಯೋಜನೆಯ ಲಾಂಛನವನ್ನು ಅನಾವರಣಗೊಳಿಸಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಮುದ್ದುಕಲಲ ಯುವಕ ಸಂಘದ ಅಧ್ಯಕ್ಷ ಜ್ಯೋತಿಕುಮಾರ್, ಶಾಂತಳ್ಳಿ ಉಪತಹಶೀಲ್ಧಾರ್ ತುಕ್ರಪ್ಪ, ಸೋಮವಾರಪೇಟೆ ವೈಲ್ಡ್ಲೈಫ್ ಡಿ.ಆರ್.ಎಫ್.ಓ. ಪಿ.ಟಿ. ಶಶಿ, ಕೆನರಾಬ್ಯಾಂಕ್ ಉದ್ಯೋಗಿ ಶೇಷಪ್ಪ ಲೋಕಯ್ಯ, ಮೊಗೇರ ಸೇವಾ ಸಮಾಜದ ಸ್ಥಾಪಕ ಸದಸ್ಯ ಲೋಹಿತ್, ಗ್ರಾ.ಪಂ.ಸದಸ್ಯ ಸೋಮನಾಥ್, ಗ್ರಾಮ ವಿಕಾಸ ಯೋಜನೆ ಉಪಾಧ್ಯಕ್ಷ ಎಂ.ಪಿ. ದೇವಪ್ಪ, ಗ್ರಾಮ ವಿಕಾಸ ಯೋಜನೆ ಖಜಾಂಜಿ ಪಿ.ಜಿ. ಗಣೇಶ, ಜಿಲ್ಲಾ ಸಮಿತಿ ಸದಸ್ಯೆ ಚಂದ್ರಾವತಿ ಉಪಸ್ಥಿತರಿದ್ದರು. ಮೊಗೇರ ಸಮಾ ಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು.