ಕೂಡಿಗೆ, ಆ. ೧೭: ಕೊಡಗು ವಿಶ್ವವಿದ್ಯಾಲಯವು ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್ನ ರಾಷ್ಟಿçÃಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ (ಒಂಓAಉಇ) ಜೊತೆಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು.
ರಾಷ್ಟಿçÃಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ, ಹೈದರಾಬಾದ್ ಮತ್ತು ಕೊಡಗು ವಿಶ್ವವಿದ್ಯಾಲಯ ಒಡಬಂಡಿಕೆಯ ಮೂಲಕ ಎರಡು ಸಂಸ್ಥೆಗಳ ಮಧ್ಯೆ ಜಂಟಿಯಾಗಿ ಸಂಶೋಧನಾ ಚಟುವಟಿಕೆಗಳನ್ನು ಮತ್ತು ಯೋಜನೆಗಳನ್ನು ಏರ್ಪಡಿಸುವುದು ಹಾಗೂ ಸಮ್ಮೇಳನ ಮತ್ತು ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು. ಈ ಭಾಗಕ್ಕೆ ಸಂಬAಧಿಸಿದ ವಿಷಯಾಧಾರಿತ ಅಧ್ಯಯನಗಳನ್ನು ಅಭಿವೃದ್ಧಿಪಡಿಸುವುದು. ಈ ಭಾಗದ ಜನತೆಗೆ
(ಮೊದಲ ಪುಟದಿಂದ) ಪೂರಕವಾಗುವಂತಹ ಅಧ್ಯಯನಗಳನ್ನು ಕೈಗೊಳ್ಳುವುದು. ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳು ಮತ್ತು ಹೈದರಾಬಾದ್ನ ರಾಷ್ಟಿçÃಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳು ಪರಸ್ಪರ ವಿನಿಮಯ ಮಾಡಿಕೊಳ್ಳುವುದು. ಕೃಷಿ ಹಾಗೂ ಸಂಬAಧಿಸಿದ ಯೋಜನೆಗಳ ಬಗೆಗೆ ಜಂಟಿಯಾಗಿ ಅಧ್ಯಯನ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಕೊಡಗು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ ವೃಂದದವರಿಗೆ ಪೂರಕವಾಗಿರುವ ಸಂಬAಧವನ್ನು ರೂಪಿಸುವಂತಹ ಹಲವಾರು ರೀತಿಯ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಮುಖ್ಯ ಉದ್ದೇಶವನ್ನು ಈ ಒಡಂಬಡಿಕೆ ಹೊಂದಿದೆ.
ಹೈದರಾಬಾದ್ನ ರಾಷ್ಟಿçÃಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಂರ್ರಾಷ್ಟಿçÃಯ ತರಬೇತಿ ಕಾರ್ಯಕ್ರಮದ ಸಂದರ್ಭದಲ್ಲಿ ಮಹಾ ನಿರ್ದೇಶಕರಾಗಿರುವ ಡಾ. ಪಿ. ಚಂದ್ರಶೇಖರ್ ಮತ್ತು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಜಂಟಿಯಾಗಿ ಒಡಂಬಡಿಕೆಗೆ ಸಹಿ ಹಾಕಿದರು.