ಮಡಿಕೇರಿ,ಆ.೧೮: ವಿಶ್ವ ಛಾಯಾಗ್ರಹಣ ದಿನಾಚರಣೆಗೆ ಸಂಬAಧಿಸಿದAತೆ ಕೊಡಗು ಪತ್ರಕರ್ತ ಸಂಘದಿAದ ಕೊಡಮಾಡುವ ಕೃಷಿಗೆ ಸಂಬAಧಿಸಿದ ಅತ್ಯುತ್ತಮ ಫೋಟೋಗ್ರಫಿ ಸ್ಪರ್ಧೆಯಲ್ಲಿ ಟಿ.ಸಿ.ನಾಗರಾಜ್ ಅವರ ಪೈರು ಹೊತ್ತ ರೈತ ಪ್ರಥಮ ಸ್ಥಾನ, ಅನಿಲ್ ಎಚ್.ಟಿ.ಅವರ ಪೈರು ಬೆಳೆಯಲು ಒಂದಾಗಿ ಬಂದೆವು ಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದೆ.

ಜಲಪಾತಕ್ಕೆ ಸಂಬAಧಿಸಿದ ಅತ್ಯುತ್ತಮ ವಿಡಿಯೋಗ್ರಾಫಿ ಪ್ರಶಸ್ತಿಯಲ್ಲಿ ಮೇದುರ ಅಬ್ಬಿ ಸೌಂದರ್ಯಕ್ಕಾಗಿ ವಿಜಯ್ ಕಾಟಕೇರಿ ಪ್ರಥಮ ಸ್ಥಾನ, ಪ್ರಸಾದ್ ಸಂಪಿಗೆಕಟ್ಟೆ ಅವರ ಕೋಟೆ ಅಬ್ಬಿ ದ್ವಿತೀಯ ಸ್ಥಾನ ಪಡೆದಿದೆ.

ದತ್ತಿ ನಿಧಿ ಪ್ರಶಸ್ತಿ: ಅತ್ಯುತ್ತಮ ಮಾನವೀಯ ಮುಖಗಳು: ಸಂಘದ ಹಿರಿಯ ಸಲಹೆಗಾರರು ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ಅವರು ತಮ್ಮ ಪುತ್ರಿ ಡಾ.ಅನುಶ್ರೀ ಅವರ ಹ್ಯಾಪಿ ಟೀತ್ ಡೆಂಟಲ್ ಕ್ಲಿನಿಕ್ ಹೆಸರಿನಲ್ಲಿ ಸ್ಥಾಪಿಸಿರುವ ‘ಮಾನವೀಯ ಮೌಲ್ಯ' ಗಳನ್ನು ಒಳಗೊಂಡ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ಅನಿಲ್ ಎಚ್.ಟಿ.ಅವರ ಬದುಕಲು ಬೇಕು ಭರವಸೆಯ ರಂಗೋಲಿ ಚಿತ್ರ ಮೊದಲ ಸ್ಥಾನ ಪಡೆದಿದೆ.

ಫೋಟೋಗ್ರಫಿ ಮತ್ತು ವೀಡಿಯೋ ಗ್ರಾಫಿಯ ತೀರ್ಪುಗಾರರಾಗಿ ಹಿರಿಯ ಛಾಯಾಚಿತ್ರಗಾರ ಎನ್.ಎಂ.ಕುಮಾರ್ ಅವರು ಕಾರ್ಯನಿರ್ವಹಿಸಿದ್ದಾರೆ ಎಂದು ಕೊಡಗು ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಪ್ರಮುಖ ಪ್ರಸಾದ್ ಸಂಪಿಗೆಕಟ್ಟೆ ತಿಳಿಸಿದ್ದಾರೆ.