ಕೂಡಿಗೆ, ಆ. ೧೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪುರಸಭೆಯ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಪೂರಕವಾಗಿ ಮತ್ತು ಪಾರಂಪರಿಕ ಕಸವನ್ನು ಶುದ್ಧೀಕರಣ, ಸ್ಥಳೀಯ ಸಾರ್ವಜನಿಕ ಮತ್ತು ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ನೂತನ ತಂತ್ರಜ್ಞಾನ ಯಂತ್ರಗಳ ಬಳಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಪುರಸಭೆಯ ನಿಯಮಾನುಸಾರವಾಗಿ ಟೆಂಡರ್ ಪ್ರಕ್ರಿಯೆಯು ಆರಂಭಗೊAಡಿದೆ.

ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಭುವನಗಿರಿ ಗ್ರಾಮದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಹೊಸ ಯೋಜನೆಯ ಅನುಗುಣವಾಗಿ ಮತ್ತು ರಾಷ್ಟಿçÃಯ ಮಟ್ಟದ ಕಸ ವಿಲೇವಾರಿಯ ನೂತನ ತಂತ್ರಜ್ಞಾನ ಯೋಜನೆ ಅಡಿಯಲ್ಲಿ ಯಂತ್ರಗಳ ಅಳವಡಿಕೆ ಮಾಡಿ ಅದರ ಮೂಲಕ ಪಾರಂಪರಿಕ ಕಸ, ಒಣ ಕಸ ಮತ್ತು ಹಸಿ ಕಸ, ಮತ್ತು ಪ್ಲಾಸ್ಟಿಕ್ ಸೇರಿದಂತೆ ವಿವಿಧ ಕಸಗಳ ವಿಂಗಡಣೆ, ಹಸಿ ಕಸದಲ್ಲಿ ಸಾವಯವ ಗೊಬ್ಬರ ತಯಾರಿಸುವ ಮತ್ತು ಹಳೆಯ ಕಸದಲ್ಲಿರುವ ವಿವಿಧ ತ್ಯಾಜ್ಯಗಳನ್ನು ಸಂಸ್ಕರಿಸುವ ಮೂಲಕ ಬೇರ್ಪಡಿಸುವಿಕೆ ಸೇರಿದಂತೆ ವಿವಿಧ ನೂತನ ಯಂತ್ರಗಳ ಅಳವಡಿಸು ಯೋಜನೆಗೆ ಸಂಬAಧಿಸಿದAತೆ ಈಗಾಗಲೇ ೩ ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಭುವನಗಿರಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕಸ ವಿಲೇವಾರಿ ಘಟಕದಲ್ಲಿ ಸ್ವಚ್ಛ ಭಾರತ್ ಯೋಜನೆ ಸೇರಿದಂತೆ ಇತರೆ ಯೋಜನೆಯ ಅಡಿಯಲ್ಲಿ ಈಗಾಗಲೇ ಯಂತ್ರಗಳ ಅಳವಡಿಕೆಗೆ ಸಂಬAಧಿಸಿದAತೆ ಬೃಹತ್ ಪ್ರಮಾಣದ ಕಟ್ಟಡಗಳು ನಿರ್ಮಾಣಗೊಂಡಿವೆ. ಅದರನ್ವಯ ಸ್ಥಳೀಯ ಗ್ರಾಮಸ್ಥರಿಗೆ ಕಸ ವಿಲೇವಾರಿ ಘಟಕದಿಂದ ಯಾವುದೇ ರೀತಿಯ ತೊಂದರೆಗಳು ಮತ್ತು ದುರ್ವಾಸನೆಗಳು ಬಾರದ ಹಾಗೆ ಹೊಸ ಅಧುನಿಕ ತಂತ್ರಜ್ಞಾನದ ಮೂಲಕ ಪಾರಂಪರಿಕ ಕಸ ವಿಂಗಡಣೆ ಮಾಡಲಾಗುತ್ತದೆ. ಅದರ ಮುಖೇನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. - ಕೆ. ಕೆ. ನಾಗರಾಜಶೆಟ್ಟಿ