ಗುಡ್ಡೆಹೊಸೂರು, ಜೂ. ೫: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಥರ್ ಗೌಡ ಅವರು ಗುಡ್ಡೆಹೊಸೂರು, ಬಸವನಹಳ್ಳಿ, ರಸುಲ್‌ಪುರ, ಬೆಟ್ಟಗೇರಿ ವಿಭಾಗಗಳಲ್ಲಿ ಅಂಗಡಿಗಳು ಮತ್ತು ಹಲವು ಮನೆಗಳಿಗೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಇದಕ್ಕೂ ಮೊದಲು ಗ್ರಾಮಕ್ಕೆ ಭೇಟಿ ನೀಡುವ ಸಂದರ್ಭ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ, ಮುಖಂಡ ಮಂಜುನಾಥ್ ಗುಂಡುರಾವ್, ಬ್ಲಾಕ್ ಮಾಜಿ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ವಲಯ ಅಧ್ಯಕ್ಷ ಬಿ.ಎಸ್.ಶುಭಶೇಖರ್, ಗ್ರಾ.ಪಂ. ಸದಸ್ಯರಾದ ರಮೇಶ್, ನಾರಾಯಣ, ಉಷ ಯತೀಶ್, ಇಲ್ಲಿನ ಪ್ರಮುಖರಾದ ಬಿ.ಸಿ. ಮಲ್ಲಿಕ, ಬಿ.ಟಿ. ಪ್ರಸನ್ನ, ಭೀಮಯ್ಯ, ಗುಡ್ಡೆಮನೆ ರವಿಕುಮಾರ್, ಪಿ.ಬಿ. ಯತೀಶ್, ನವೀನ್.ಬಿ.ಸಿ, ಬಿ.ಎಸ್.ದಿನೇಶ್, ನಂಗಾರು ಜಗ್ಗ ಮುಂತಾದವರು ಹಾಜರಿದ್ದರು. ಗುಡ್ಡೆಹೊಸೂರಿ ನಿಂದ ತೆರಳಿದ ಶಾಸಕರು ನಂಜರಾಯಪಟ್ಟಣ, ವಾಲ್ನೂರು, ಚೆಟ್ಟಳ್ಳಿ ಗ್ರಾಮಗಳಿಗೆ ತೆರಳಿ ಮತದಾರರಿಗೆ ಅಭಿನಂದನೆ ಸಲ್ಲಿಸುವುದರೊಂದಿಗೆ ನಾಗರಿಕರ ಅಹವಾಲುಗಳನ್ನು ಸ್ವೀಕರಿಸಿದರು.