ಮಡಿಕೇರಿ, ಜೂ. ೬: ನಗರದ ಸ್ಟಿವರ್ಟ್ ಹಿಲ್ ರಸ್ತೆಯಲ್ಲಿ ಹಲವು ದಿನಗಳಿಂದ ರಸ್ತೆಯ ಅಡ್ಡಗಲದ ಮೋರಿಯ ಕಾಂಕ್ರಿಟ್ ಸ್ಲಾಬ್ ಬಾಯಿ ತೆರೆದಿದ್ದು ಅಪಾಯ ಆಹ್ವಾನಿಸುತ್ತಿದೆ. ಕಾಂಕ್ರೀಟ್‌ಗೆ ಅಳವಡಿಸಲಾಗಿದ್ದ ರಾಡ್‌ಗಳೂ ಹೊರಗೆ ಬಂದಿದ್ದು, ವಾಹನ ಸಂಚಾರ ಅಪಾಯಕಾರಿಯಾಗಿದೆ. ಈ ಬಗ್ಗೆ ಹಲವು ಬಾರಿ ನಗರಸಭಾ ಪೌರಾಯುಕ್ತರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಇನ್ನೇನು ಮುಂಗಾರು ಪ್ರಾರಂಭ ವಾಗಲಿದ್ದು, ಅಪಾಯ ಸಂಭವಿಸುವ ಮುನ್ನ ನಗರಸಭೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿ ಸ್ಥಳೀಯರ ಪರವಾಗಿ ಡಾ. ರಚನಾ ಅವರು ಒತ್ತಾಯಿಸಿದ್ದಾರೆ.