ಚೆಯ್ಯಂಡಾಣೆ, ಜೂ. ೫: ವೀರಾಜಪೇಟೆ ವ್ಯಾಪ್ತಿಯ ಗುತ್ತಿಗೆದಾರರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಕದನೂರು ವೇ ಬ್ರಿಡ್ಜ್ ಸಮೀಪದ ಎಸಿಸಿ ಕಟ್ಟಡದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಅದಾನಿ ಎಸಿಸಿ ಸಂಸ್ಥೆಯ ಕೊಡಗು ಹಾಗೂ ಹಾಸನ ತಾಂತ್ರಿಕ ಅಧಿಕಾರಿ ಯೋಗಾನಂದ್ ಮಾತನಾಡಿ ಸಿಮೆಂಟ್ ಬಳಕೆ ಬಗ್ಗೆ ಗ್ರಾಹಕರಿಗೆ ಹಾಗೂ ಗುತ್ತಿಗೆದಾರರಿಗೆ ಸಮಗ್ರ ಮಾಹಿತಿ ನೀಡಿ, ಸಿಮೆಂಟ್ ಯಾವ ರೀತಿಯಲ್ಲಿ ಉಪಯೋಗಿಸಬೇಕು, ಸಿಮೆಂಟ್‌ನಲ್ಲಿ ಯಾವುದೆಲ್ಲ ಮಿಶ್ರಣ ಉಪಯೋಗಿಸುತ್ತಾರೆಂದು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕೊಡಗಿನಲ್ಲಿ ಅತೀ ಹೆಚ್ಚು ಸಿಮೆಂಟ್ ಖರೀದಿಸಿ ಅದನ್ನು ಗ್ರಾಹಕರಿಗೆ ತಲುಪಿಸಿ ನಂಬರ್ ಒನ್ ಡೀಲರ್ ಆಗಿ ಆಯ್ಕೆಯಾದ ಶಹಲಾ ಹಾರ್ಡ್ವೆರ್ ಮಾಲೀಕರಾದ ಮಾಜಿ ಸೈನಿಕ ಸಲಾಂ ರವರಿಗೆ ಬುಲ್ಲೆಟ್ ಎನ್‌ಫಿಲ್ಡ್ ಮೋಟಾರ್ ಬೈಕ್ ಅನ್ನು ಅದಾನಿ ಎಸಿಸಿ ಸಂಸ್ಥೆಯ ಮೈಸೂರು ವಲಯ ಅಧಿಕಾರಿ ಝಕೀ ಮುಹಮ್ಮದ್‌ರವರು ಸಲಾಂ ರವರಿಗೆ ಕೀ ನೀಡುವುದರ ಮೂಲಕ ಹಸ್ತಾಂತರಿಸಿದರು.

ಈ ಸಂದರ್ಭ ಎಸಿಸಿ ಕೊಡಗು ಜಿಲ್ಲಾ ಅಧಿಕಾರಿ ಶೋಭಿತ್, ಕೊಡಗು ಜಿಲ್ಲಾ ತಾಂತ್ರಿಕ ಅಧಿಕಾರಿ ಪ್ರಶಾಂತ್, ಗುತ್ತಿಗೆದಾರರಾದ ನಟರಾಜ್, ಪಟ್ಟಡ ರಂಜಿ, ರಝಾಕ್, ಪೊನ್ನಕಚ್ಚಿರ ಸುಭಾಷ್, ಬಲ್ಟಿಕಾಳಂಡ ರಂಜಿ, ಬಾಬಿ ವರ್ಗಿಸ್, ಮಾಜಿ ಸೈನಿಕ ಮುಂಡಿಯೊಳAಡ ಅಜಿತ್ ಸುಬ್ಬಯ್ಯ, ಕುಂಞಬ್ದುಲ್ಲ ಮತಿತ್ತರರು ಉಪಸ್ಥಿತರಿದ್ದರು.