ಗುಡ್ಡೆಹೊಸೂರು, ಜೂ. ೫: ಇಲ್ಲಿಗೆ ಸಮೀಪದ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಸ್ಥಾದಲ್ಲಿ ಮೂರು ದಿನಗಳ ಕಾಲ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.

ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ಚಂಡಿಕಾಹೋಮ ಸೇರಿದಂತೆ ವಿವಿಧ ಹೋಮಹವನಗಳು ನಡೆದವು. ಈ ಪೂಜಾ ಕಾರ್ಯವನ್ನು ತಂತ್ರಿಯವರಾದ ಪ್ರಕಾಶ್ ಆಚಾರ್ಯ ಪೂಂಜ ಅವರ ತಂಡ ನೆರವೇರಿಸಿತು. ಮೂರು ದಿನಗಳಲ್ಲಿ ಲೋಕ ಕಲ್ಯಾಣಾರ್ಥ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಿತು.

ಇದೇ ಸಂದರ್ಭ ದೇವಸ್ಥಾನದಲ್ಲಿ ತುಲಾಭಾರ, ಅಲಂಕಾರಪೂಜೆ, ತ್ರಿಮಧರ, ಕ್ಷೀರಾಭಿಷೇಕ, ಕುಂಕುಮಾರ್ಚನೆ, ರಂಗಪೂಜೆ, ಹೂವಿನ ಅಲಂಕಾರ ಪೂಜೆ ಇನ್ನಿತರ ಸೇವೆ ನಡೆಯಿತು. ಈ ಪೂಜಾಕಾರ್ಯದಲ್ಲಿ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು ಉತ್ಸವ ಸಮಿತಿ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.