ಗುಡ್ಡೆಹೊಸೂರು, ಮೇ ೨೮: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದ ಗ್ರಾಮ ದೇವರ ಉತ್ಸವವು ತಾ. ೨೯ ಹಾಗೂ ೩೦ ರಂದು ನಡೆಯಲಿದೆ. ಶ್ರೀ ತೋಟಂದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಅಂದು ಸಂಜೆ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. ತಾ. ೩೦ರ ಮುಂಜಾನೆ ೪ ಗಂಟೆಯಿAದ ವಿವಿಧ ಹೋಮಹವನಗಳು ನಡೆಯಲಿವೆ. ಬೆಳಗ್ಗೆ ೧೧.೩೦ ಗಂಟೆಗೆ ಶ್ರೀ ಬಸವಲಿಂಗ ಸ್ವಾಮಿಗಳ ಮತ್ತು ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಮ್ಮುಖದಲ್ಲಿ ಕೆಂಡಕೊAಡದ ಅಗ್ನಿಪೂಜೆ ನಡೆಯಲಿದೆ. ಸಮಿತಿಯ ಅಧ್ಯಕ್ಷೆ ಹೆಚ್.ಎಸ್. ಪೂರ್ಣಿಮ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.