ಕ್ರೀಡೆಗಳು ಬಾಂಧವ್ಯ ವೃದ್ಧಿಗೆ ಸಹಕಾರಿ ಎಂದು ಮೈಸೂರು ರಾಜವಂಶಸ್ಥ ಯಧುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದೆ. ದೇಶಾಭಿಮಾನದೊಂದಿಗೆ ಕ್ರೀಡಾಭಿಮಾನವನ್ನು ಜಿಲ್ಲೆಯ ಜನ ಮೈಗೂಡಿಸಿಕೊಂಡಿದ್ದಾರೆ. ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಾಧನೆ ಮಾಡುವ ನಿಟ್ಟಿನಲ್ಲಿ ಈ ರೀತಿಯ ಕ್ರೀಡಾಕೂಟಗಳು ಹೆಚ್ಚಾಗಿ ನಡೆಯಬೇಕು ಎಂದು ಆಶಿಸಿದರು. ಪ್ರಾಯೋಜಕ ವಿಶಾಲ್ ಶಿವಪ್ಪ ಮಾತನಾಡಿ, ಸುಂಟಿಕೊಪ್ಪದಲ್ಲಿ ಕ್ರೀಡಾ ಕ್ಷೇತ್ರದ ಕಾಯಕಲ್ಪಕ್ಕೆ ಪ್ರಯತ್ನಿಸುವ ನಿಟ್ಟಿನಲ್ಲಿ ನೂತನ ಶಾಸಕರ ಗಮನಸೆಳೆಯಲಾಗುವುದು ಎಂದ ಅವರು, ತನ್ನ ಹಾಗೂ ವಿನೋದ್ ಶಿವಪ್ಪ ಅವರ ಪ್ರಯತ್ನದಿಂದ ೨೫ ವರ್ಷಗಳಿಂದ ಕ್ರೀಡಾಕೂಟ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕ್ರೀಡಾ ಜವಾಬ್ದಾರಿ ಮುಂದುವರೆಸಿಕೊAಡು ಹೋಗುತ್ತೇನೆ ಎಂದರು.

ಕ್ರೀಡಾಕೂಟಕ್ಕೆ ಮುನ್ನ ನಗರದ ಮುಖ್ಯಬೀದಿಗಳಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನು ಮೆರವಣಿಗೆ ನಡೆಸಿ ಕ್ರೀಡಾಂಗಣಕ್ಕೆ ಸ್ವಾಗತಿಸಲಾಯಿತು.