ಕಡಂಗ, ಮೇ ೨೮: ಕೊಡಗು ಜಿಲ್ಲೆಯ ೫೬ ಮೊಹಲ್ಲಾಗಳ ಪದಾಧಿಕಾರಿಗಳು ಕೊಡಗು ಖಾಝಿ ಕಾಂತಪುರA ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರನ್ನು ಭೇಟಿಯಾದರು. ಕೊಡಗು ಜಿಲ್ಲೆಯ ಸಂಯುಕ್ತ ಖಾಝಿಯಾದ ಕಾಂತಪುರA ಎ ಪಿ ಉಸ್ತಾದರು ಕೊಡಗಿಗೆ ಆಗಾಗ್ಗೆ ಭೇಟಿ ನೀಡಿ ಸಂಬAಧವನ್ನು ಹೆಚ್ಚಿಸುತ್ತಿದ್ದರು.

ಈ ಸಂಬAಧವನ್ನು ಗಟ್ಟಿಗೊಳಿಸುವ ಸಲುವಾಗಿ ಸುನ್ನಿ ಸಂಘಟನೆಗಳ ನಾಯಕರು ಹಾಗೂ ಸಮಿತಿಯ ಪದಾಧಿಕಾರಿಗಳು ಕ್ಯಾಲಿಕಟ್‌ನ ಜಾಮಿಉಲ್ ಫುತೂಹ್‌ನಲ್ಲಿ ಸಭೆ ನಡೆಸಿದರು. ಮೊಹಲ್ಲಾ - ಸಾಂಸ್ಥಿಕ ಸಬಲೀಕರಣ, ಆದರ್ಶ ಪ್ರಚಾರ, ಶಿಕ್ಷಣ ಮತ್ತು ಸಾಮಾಜಿಕ ಸೇವೆ, ಇತ್ಯಾದಿಗಳ ಕುರಿತು ಚರ್ಚೆ ನಡೆದವು. ಕಾತಪುರಂ ಉಸ್ತಾದ್ ಎಲ್ಲಾ ಮೊಹಲ್ಲಾಗಳಲ್ಲಿ ಮಹ್ಲರತುಲ್ ಬದ್ರಿಯ್ಯಃ ಪ್ರಾರಂಭಿಸಲು ಸೂಚಿಸಿದರು.

ಜೊತೆಗೆ ಈ ಬಾರಿ ಹಜ್‌ಗೆ ತೆರಳುವವರಿಗಾಗಿ ಪ್ರಾರ್ಥಿಸಿದರು. ಕಾಂತಪುರA ಎ ಪಿ ಉಸ್ತಾದ್ ಖಾಝಿಯಾಗಿರುವ ವಿವಿಧ ಮೊಹಲ್ಲಾಗಳ ಸಂಗಮ ಮುಂದಿನ ದಿನಗಳಲ್ಲಿ ಜಾಮಿಉಲ್ ಫುತೂಹ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಡಾ| ಎಪಿ ಅಬ್ದುಲ್ ಹಕೀಂ ಅಝ್ಹರಿ ಮಹಲ್ಲ್ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನಾಇಬ್ ಖಾಝಿ ಕೆ.ಎಸ್.ಶಾದುಲಿ ಫೈಝಿ, ಕರ್ನಾಟಕ ಎಸ್ ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಝ್ ಸಅದಿ, ಇಸ್ಮಾಯಿಲ್ ಸಖಾಫಿ ಕೊಂಡAಗೇರಿ, ಅಶ್ರಫ್ ಅಹ್ಸನಿ, ಸಿ.ಪಿ.ಅಬ್ದುಲ್ ಮಜೀದ್ ಮದನಿ, ಮುಹಮ್ಮದ್ ಹಾಜಿ, ಅಬ್ದುಲ್ ಹಮೀದ್ ಮುಸ್ಲಿಯಾರ್, ಇಲ್ಯಾಸ್ ತಙ್ಙಳ್ ಎರುಮಾಡ್, ಝುಬೈರ್ ಸಅದಿ, ಅಡ್ವೊಕೇಟ್ ಕುಞ್ಞಬ್ದುಲ್ಲಾ ಹಾಗೂ ಪಿಎ ಯೂಸುಫ್ ಹಾಜಿ ಹಾಜರಿದ್ದರು.