ಗೋಣಿಕೊಪ್ಪ ವರದಿ, ಮೇ ೨೮: ಕೊಡಗು ಆಯುರ್ವೇದ ಕೇರ್ ಹಾಗೂ ಸುಳ್ಯ ಸೌಭಾಗ್ಯ ವಿಕಲ ಚೇತನರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಜೂನ್ ೭ ರಂದು ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗಾಗಿ ವೀರಾಜಪೇಟೆ ಪುರಭವನದಲ್ಲಿ ವಿಶೇಷ ಆರೋಗ್ಯ ಉಚಿತ ಶಿಬಿರ ಆಯೋಜಿಸಲಾಗಿದೆ.

ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆವರೆಗೆ ಶಿಬಿರ ನಡೆಯಲಿದೆ. ಪ್ರತೀ ಎರಡು ತಿಂಗಳಿಗೊಮ್ಮೆ ಶಿಬಿರ ನಡೆಯಲಿದ್ದು, ಕಾಲು ಇಲ್ಲದವರಿಗೆ ಉಚಿತವಾಗಿ ಕೃತಕ ಕಾಲು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.