ಮಡಿಕೇರಿ, ಜ. ೩: ಅರ್ವತೋಕ್ಲು ಮೈಸೂರಮ್ಮ ನಗರದ ಕಲರವ ಚಿನ್ನರ ಸಂಘದ ವತಿಯಿಂದ ಮಕ್ಕಳಿಗೆ ಹುಂಡಿ ಡಬ್ಬ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳು ಅನಾವಶ್ಯಕ ಹಣದ ಖರ್ಚು ಮಾಡಿ ಹಣ ಪೋಲು ಮಾಡುವ ಬದಲು ಹಣ ಉಳಿತಾಯ ಮಾಡುವ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ಕಾರ್ಯಕ್ರಮ ನಡೆಸಲಾಯಿತು. ಸುಮಾರು ೫೦ ಮಕ್ಕಳಿಗೆ ಅರ್ವತೋಕ್ಲು ಮೈಸೂರಮ್ಮ ನಗರದ ಲೇಖಕಿ ವಾತ್ಸಲ್ಯ ಅವರು ಹುಂಡಿ ಡಬ್ಬಗಳನ್ನು ನೀಡಿದರು. ಕಾರ್ಯಕ್ರಮ ಶಿಕ್ಷಕಿ ರಶ್ಮಿ ದೇವಯ್ಯ ಅವರ ಮುಂದಾಳತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬಿಂಬಿಕ ಬೋಜಮ್ಮ ಪ್ರಾರ್ಥನೆ ಮಾಡಿದರು. ಮಮತಾ ದಿನೇಶ್ ಹಣ ಉಳಿತಾಯದ ಮಹತ್ವದ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು. ಅಂಗನವಾಡಿ ಶಿಕ್ಷಕಿ ಯಶಸ್ವಿನಿ ಹಾಗೂ ಇತರರು ಇದ್ದರು. ಮಕ್ಕಳಿಗೆ ಕೊನೆಯಲ್ಲಿ ಸಿಹಿ ವಿತರಿಸಲಾಯಿತು.