ಮಡಿಕೇರಿ, ಜ. ೩: ಕುಶಾಲ ನಗರದ ಹಾರಂಗಿಯಲ್ಲಿರುವ ಜ್ಞಾನ ಗಂಗಾ ವಸತಿ ಶಾಲೆ ವತಿ ಯಿಂದ ಏರ್ಪಡಿಸಿದ್ದ ಜಿಲ್ಲಾಮಟ್ಟದ ಅಂತರ್ ಬ್ಯಾಡಿಂಟನ್ ಸ್ಪರ್ಧೆಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿಗಳಾದ ಆಕರ್ಷ್ ಕೊಂಗAಡ, ಅಯ್ಯಪ್ಪ ಎಂ.ಜಿ., ತಹನ್ ಪೂವಯ್ಯ ಸಿ., ಮತ್ತು ೮ನೇ ತರಗತಿ ವಿದ್ಯಾರ್ಥಿ ಸೋಹನ್ ಗೌಡ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಟ್ರೋಫಿ ಮತ್ತು ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಾರ್ಗ ದರ್ಶನ ನೀಡಿದ ತರಬೇತುದಾರ ರಘುರಾಜ್, ದೈಹಿಕ ಶಿಕ್ಷಕಿ ಸರಿತಾ ಬಿ.ಯು. ಮತ್ತು ಪೋಷಕರಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್., ಕಾರ್ಯದರ್ಶಿ ವಿನೋದ್ ಪಿ.ಎನ್., ಮುಖ್ಯೋಪಾ ಧ್ಯಾಯಿನಿ ಪ್ರಮೀಳಾ ಎಂ.ಬಿ., ಸಹ ಮುಖ್ಯೋಪಾಧ್ಯಾಯಿನಿ ಭೂಶಿರ ಟಿ.ಎಂ. ಹಾಗೂ ಶಿಕ್ಷಕವೃಂದ ಮತ್ತು ಸಿಬ್ಬಂದಿಗಳು ಇದ್ದಾರೆ.