ಕುಶಾಲನಗರ, ಡಿ. ೨೯: ಮಂಗಳೂರು ವಿಶ್ವ ವಿದ್ಯಾನಿಲಯದ ಅಳುವಾರ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರಕ್ಕೆ ಕುಶಾಲನಗರದಿಂದ ಬಸ್ ಸೌಲಭ್ಯ ಕಲ್ಪಿಸುವಂತೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ ಅಪ್ಪಚ್ಚು ರಂಜನ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ವಿಶ್ವ ವಿದ್ಯಾನಿಲಯ ಕೇಂದ್ರಕ್ಕೆ ಜಿಲ್ಲೆ ಮತ್ತು ನೆರೆಜಿಲ್ಲೆಯ ಭಾಗಗಳಿಂದ ವಿದ್ಯಾರ್ಥಿಗಳು ನಿತ್ಯ ತೆರಳುತ್ತಿದ್ದು, ಬಸ್ ಸೌಲಭ್ಯ ಇಲ್ಲದೆ ತೊಂದರೆ ಉಂಟಾಗುತ್ತಿದೆ. ಕೂಡಲೇ ಬಸ್ ಸೌಕರ್ಯ ಕಲ್ಪಿಸುವಂತೆ ಸಂಸ್ಥೆಯ ವಿಭಾಗೀಯ ನಿಯಂತ್ರಕರಿಗೆ ಸೂಚನೆ ನೀಡಿದ್ದಾರೆ.

ಬೆಳಿಗ್ಗೆ ೯ ಗಂಟೆಗೆ ಕುಶಾಲನಗರ ದಿಂದ ಚಿಕ್ಕಅಳುವಾರ ಮಾರ್ಗ ನಂತರ ಕುಶಾಲನಗರಕ್ಕೆ ಹಿಂತಿರುಗುವುದು ಮತ್ತು ಸಂಜೆ ೪ ಗಂಟೆಗೆ ಕುಶಾಲನಗರ- ಚಿಕ್ಕ ಅಳುವಾರದಿಂದ ಸಂಜೆ ೪.೩೦ ಕ್ಕೆ ಕುಶಾಲನಗರಕ್ಕೆ ಹಿಂತಿರುಗುವAತೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.