ಮಡಿಕೇರಿ, ಡಿ. ೨೯: ಜೀವನದಲ್ಲಿ ಜಿಗುಪ್ಸೆ ಹೊಂದಿ ಗುತ್ತಿಗೆದಾರನೋರ್ವ ಕೆಲಸ ಮಾಡುತ್ತಿದ್ದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ದೇಚೂರಿನಲ್ಲಿ ನಡೆದಿದೆ.

ಮೂಲತಃ ಪುತ್ತೂರಿನ ನೆಹರುನಗರ ನಿವಾಸಿ, ಪ್ರಸ್ತುತ ಮೇಕೇರಿಯಲ್ಲಿ ನೆಲೆಸಿದ್ದ ಗೋವಿಂದ (೫೦) ಮೃತ ದುರ್ಧೈವಿ. ಕಳೆದ ೧೨ ವರ್ಷಗಳಿಂದ ಜಿಲ್ಲೆಯಲ್ಲಿ ಕಟ್ಟಡ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಮೃತ ಗೋವಿಂದ ಕೆಲ ವೈಯಕ್ತಿಕ ಕಾರಣದಿಂದ ನೊಂದು ತಾನು ಗುತ್ತಿಗೆ ವಹಿಸಿಕೊಂಡಿದ್ದ ದೇಚೂರಿನ ತಿಮ್ಮಯ್ಯ ಎಂಬವರಿಗೆ ಸೇರಿದ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ನೇಣಿಗೆ ಶರಣಾಗಿದ್ದಾರೆ. ಮೃತರ ಪತ್ನಿ ಹಾಗೂ ಮಕ್ಕಳು ಪುತ್ತೂರಿನಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.

ಪತ್ನಿಯ ದೂರಿನ ಅನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.