*ಗೋಣಿಕೊಪ್ಪ, ಅ. ೪: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ವೀರಾಜಪೇಟೆ ತಾಲೂಕಿನ ವಿವಿಧ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಇಲಾಖಾ ಅಧಿಕಾರಿಗಳು ಸನ್ಮಾನಿಸಿದರು.
ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಬೈರಂಬಾಡ ಪ್ರಾಥಮಿಕ ಶಾಲೆಯ ಶಿಕ್ಷಕಿ ಹೆಚ್.ಎನ್. ಪದ್ಮ ಚೂರಿಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಬಿ.ಕೆ. ಜಯಲಕ್ಷಿ÷್ಮ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಹೆಚ್.ಜಿ. ಸಾವಿತ್ರಿ ಇವರುಗಳನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಸಂಪನ್ಮೂಲ ಸಮನ್ವಯಾ ಧಿಕಾರಿ ವನಜಾಕ್ಷಿ ವೀರಾಜಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈ ಸುರೇಂದ್ರ ಪದಾಧಿಕಾರಿಗಳಾದ ಹೆಚ್.ಎಂ. ಪಾರ್ವತಿ, ಬಿ.ಟಿ. ದೇವರಾಜು, ಬಿ.ಎಲ್. ಅಶ್ವಥ್, ಪಿ.ಎಂ. ಸುಬ್ರಮಣಿ, ಸಿ.ಸಿ. ಭಾರತಿ, ಎನ್. ನಿಂಗರಾಜು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಯವಂಡ ಉತ್ತಪ್ಪ, ಪದಾಧಿಕಾರಿ ಗಳಾದ ಡಿ. ಚಂದನ, ಕೃಷ್ಣ ಚೈತನ್ಯ, ಅರುಣ್ ಅನ್ಸಿ ಡಿಸೋಜ, ಈಶ್ವರ್ ನಾಯಕ, ಮೀರಾ, ರಂಗಸ್ವಾಮಿ, ಅನ್ರಿತ ಪೋಟ್ರಾಡೊ, ಜಿಲ್ಲಾ ಅನು ದಾನಿತ ಶಾಲಾ ನೌಕರರ ಸಂಘದ ಅಧ್ಯಕ್ಷ ಪಿ.ಎ. ಪ್ರಭು ಕುಮಾರ್, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ. ಕುಮಾರ್, ಕಾರ್ಯದರ್ಶಿ ಸೀತಾ, ವೀರಾಜಪೇಟೆ ತಾಲೂಕು ಮುಖ್ಯ ಶಿಕ್ಷಕರ ಸಂಘದ ಕಾರ್ಯ ದರ್ಶಿ ಲೋಕೇಶ್, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ರೋಹಿತ್, ಜಿ. ಗಿಡ್ಡಯ್, ರಂಗನಾಥ್, ತಾಲೂಕು ದೈಹಿಕ ಶಿಕ್ಷಣ ಗ್ರೇಡ್ ೧ ಸಂಘದ ಸಂಘದ ಅಧ್ಯಕ್ಷ ಸಿ.ಎಂ. ಸೋಮಯ್ಯ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಎ. ಪ್ರವೀಣ್, ತಾಲೂಕು ದೈಹಿಕ ಸಂಘದ ಪದಾಧಿಕಾರಿಗಳಾದ ಎಂ.ಎಸ್. ತಮ್ಮಯ್ಯ, ಸುಬ್ರಮಣಿ, ಮೊಣ್ಣಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಆರ್. ಗಾಯತ್ರಿ, ಶಿಕ್ಷಣ ಸಂಯೋಜಕ ಅಯ್ಯಪ್ಪ, ವಿಶಾಲಾಕ್ಷಮ್ಮ, ಮಾರ್ಗರೇಟ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಸಿ. ಗೀತಾಂಜಲಿ, ಪುಷ್ಪಾ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಅಜಿತಾ, ತಿರುನೆಲ್ಲಿಮಡ ಜೀವನ್, ರಾಧಾ, ಎನ್.ಆರ್. ರವಿ, ಚಿಕ್ಕದೇವಯ್ಯ ಹೆಚ್.ಜಿ, ಸವಿತಾ ಕುಮಾರಿ, ಅನಿತಾಕುಮಾರಿ, ವಿ.ಟಿ. ವೆಂಕಟೇಶ್, ಕರುಂಬಯ್ಯ, ಪ್ರವೀಣ್, ಸುಷ, ಶ್ರೀನಿವಾಸ, ಕೇಶವಮೂರ್ತಿ ಇದ್ದರು.