ಮಡಿಕೇರಿ, ಅ. ೨: ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಂಜೆ ೬.೩೦ಕ್ಕೆ ಮಕ್ಕಳ ದಸರಾ ಅಂಗವಾಗಿ ಟಿ.ವಿ. ರಿಯಾಲಿಟಿ ಶೋ ಖ್ಯಾತಿಯ ಜ್ಞಾನ ಗುರುರಾಜ್, ಮಿಥುನ್ ಮುದ್ದಯ್ಯ ಪ್ರಸ್ತುತಿ ಪುಟಾಣಿ ಕಲರವ, ಜಿಲ್ಲೆಯ ಬಾಲಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ಅವರ ಕಲಾಕಾವ್ಯ ನಾಟ್ಯ ಶಾಲೆಯ ವತಿಯಿಂದ ರಾಮಾಯಣ ದರ್ಶನಂ ನೃತ್ಯ, ವಿಕ್ರಂ ಜಾದೂಗಾರ್ ಅವರಿಂದ ಜಾದು ಪ್ರದರ್ಶನ ನೆರವೇರಲಿದೆ.