ಮಡಿಕೇರಿ, ಅ. ೨: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕಂಚಿಕಾಮಾಕ್ಷಿಯಮ್ಮ ಮತ್ತು ಮುತ್ತುಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ೫೯ನೇ ವರ್ಷದ ಉತ್ಸವಕ್ಕೆ ಸಜ್ಜಾಗುತ್ತಿದೆ ಎಂದು ಕಂಚಿಕಾಮಾಕ್ಷಿ ಮಂಟಪ ಸಮತಿಯ ಅಧ್ಯಕ್ಷರುಗಳಾದ ಭೌತಮ್ ಸುವರ್ಣ ಹಾಗೂ ಜಿ.ಆರ್. ರಾಘವೇಂದ್ರ ತಿಳಿಸಿದ್ದಾರೆ.

ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಸೈಜು ಕೇರಳ ಪ್ಲಾಟ್‌ಫಾರಂ ನಿರ್ಮಾಣ ಮಾಡಲಿದ್ದು, ಈ ಬಾರಿಯ ಮಂಟಪದಲ್ಲಿ ಗೋಮಾತೆಯ ಮಹಾತ್ಮೆ ಕಥಾಸಾರಾಂಶವನ್ನು ಅಳವಡಿಸಲಾಗುತ್ತಿದೆ. ಟ್ರಾö್ಯಕ್ಟರ್ ಸೆಟ್ಟಿಂಗ್ಸ್ನ್ನು ಮಡಿಕೇರಿಯ ಬಿಪಿನ್ ಮತ್ತು ತಂಡ ಮಾಡಲಿದ್ದು, ಲೈಟಿಂಗ್ ಬೋರ್ಡನ್ನು ದಿಂಡಿಗಲ್‌ನ ಡೇವಿಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕವನ್ನು ಅಜಿತ್ ಕಟ್ಟಪಾಣ ಒದಗಿಸಲಿದ್ದು, ಕ್ಯಾಲಿಕಟ್‌ನ ಅಪ್ಪು ಸ್ಟುಡಿಯೋ ಸೆಟ್ಟಿಂಗ್ಸ್ ವ್ಯವಸ್ಥೆ ಮಾಡಲಿದ್ದಾರೆ. ಫೈರ್ ವರ್ಕ್ನ್ನು ಸಂದೇಶ್ (ಸಂದು) ನಿರ್ವಹಿಸಲಿದ್ದಾರೆ. ಮಡಿಕೇರಿಯ ಶೋಮ್ಯಾನ್ ಕ್ರಿಯೇಷನ್ಸ್ ಕಲಾವಿದರ ಬಳಗ ಮಂಟಪವನ್ನು ರಚನೆ ಮಾಡಲಿದ್ದು, ಇದೇ ಮೊದಲ ಬಾರಿಗೆ ಆಪ್ಟಿಕಲ್ ಇಲ್ಯುಷನ್ ಹಾಗೂ ಲೇಸರ್ ಶೋ ತಂತ್ರಜ್ಞಾನವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಒಟ್ಟು ೨೪ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುವುದು ಎಂದು ಭೌತಮ್ ಸುವರ್ಣ ಹಾಗೂ ರಾಘವೇಂದ್ರ ಮಾಹಿತಿ ನೀಡಿದ್ದಾರೆ.

- ಉಜ್ವಲ್ ರಂಜಿತ್