ಮಡಿಕೇರಿ, ಅ. ೧: ನಗರದ ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ೪೬ನೇ ವರ್ಷದ ದಸರಾ ಉತ್ಸವಕ್ಕೆ ಸಜ್ಜಾಗುತ್ತಿದ್ದು, ಈ ಬಾರಿ ಮಹಾಗಣಪತಿಗೆ ಸಿಂಧೂರ ಗಣಪತಿ ನಾಮಪ್ರಾಪ್ತಿ ಆದ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಎಂ.ಜಿ. ಚಂದ್ರ ತಿಳಿಸಿದ್ದಾರೆ.
ಎರಡು ಟ್ರಾö್ಯಕ್ಟರ್ಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿಯ ಪೂಜಾ ಲೈಟಿಂಗ್ಸ್ನ ನಜೀರ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಸ್ಟುಡಿಯೋ ಸೆಟ್ಟಿಂಗ್ಸನ್ನು ಮಡಿಕೇರಿ ಫÀÆ್ಯಚರ್ ಇವೆಂಟ್ನ ಲೋಕೇಶ್ ಮಾಡಲಿದ್ದು, ಪ್ಲಾಟ್ ಫಾರಂ ನಿರ್ಮಾಣ ಹಾಗೂ ಕಲಾಕೃತಿಗಳಿಗೆ ಚಲನ ವಲನ ವ್ಯವಸ್ಥೆಯನ್ನು ಬಿ.ಎನ್. ಕ್ರಿಯೇಷನ್ಸ್ನ ಪುನಿತ್, ಮೋಹನ್ (ಕುಟ್ಟಿ) ಮಾಡಲಿದ್ದಾರೆ. ಟ್ರಾö್ಯಕ್ಟರ್ ಸೆಟ್ಟಿಂಗ್ಸನ್ನು ಮಡಿಕೇರಿ ಡಿ ಕ್ರಿಯೇಷನ್ಸ್ನ ಗಣೇಶ್ ಮತ್ತು ನಿತೀಶ್ ಮಾಡಲಿದ್ದಾರೆ.
ಗೋವಾದ ೮ಆ ಸರೌಂಡ್ ಸೌಂಡ್ ಧ್ವನಿವರ್ಧಕವನ್ನು ಒದಗಿಸಲಿದ್ದು, ೧೯ ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಕಲಾಕೃತಿಗಳನ್ನು ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ವಿಶೇಷ ಕಲಾಕೃತಿಗಳನ್ನು ಮಡಿಕೇರಿ ಪೂಜಾ ಲೈಟಿಂಗ್ನ ರಾಘು ಮತ್ತು ತಂಡದವರು ತಯಾರಿಸಲಿದ್ದಾರೆ. ಸ್ಪೆಷಲ್ ಎಫೆಕ್ಟ್ನ್ನು ಗುಜರಾತ್ನ ತಂಡ ಮಾಡಲಿದೆ. ಕ್ರೇನ್ ಸೆಟ್ಟಿಂಗ್ಸನ್ನು ಅಲಂಕಾರ್ ಫ್ಯಾಬ್ರಿಕೇಷನ್ನ ಯಾಸಿನ್ ಮಾಡಲಿದ್ದಾರೆ.
ಒಟ್ಟು ೨೪.೫೦ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುವುದು ಎಂದು ಚಂದ್ರ ಮಾಹಿತಿ ನೀಡಿದರು.
-ಉಜ್ವಲ್ ರಂಜಿತ್