ಮಡಿಕೇರಿ, ಸೆ. ೨೨: ನಂ. ೩೮೧೮೯ನೇ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದನೇ ವರ್ಷದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಪೆರಾಜೆ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು. ೨೦೨೧-೨೨ನೇ ಸಾಲಿಗೆ ರೂ.೩೩.೫೧ ಲಾಭ ಗಳಿಸಿರುವುದಾಗಿ ಅಧ್ಯಕ್ಷರು ಮಾಹಿತಿಯಿತ್ತರು.

ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಹಕಾರ ಕ್ಷೇತ್ರದ ಪ್ರಗತಿ ಸಾಧ್ಯವಾಗುತ್ತದೆ. ಸಹಕಾರ ಸಂಸ್ಥೆಯು ಸಾಮಾಜಿಕ ಬದ್ಧತೆ, ಶುದ್ಧತೆ, ಆಧುನಿಕತೆ, ತಾಂತ್ರಿಕತೆ ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಖಾಸಗಿ ಕ್ಷೇತ್ರದ ಸ್ಪರ್ಧೆಯನ್ನು ಎದುರಿಸಿ ಕೊಂಡು ಸರ್ಕಾರದ ನೀತಿ ನಿಯಮಗಳ ಚೌಕಟ್ಟಿನೊಳಗೆ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರ ಚಳುವಳಿಯ ಆಳ ಅಗಲ ವ್ಯಾಪಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ಸ್ಥಾಪಿಸಿರುವುದು ಸಹಕಾರದ ಬೆಳವಣಿಗೆ ಪೂರಕವಾಗಿದೆ ಎಂದು ಹೇಳಿದರು. ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಗೆ ಕಾರಣಕರ್ತರು ಹಾಗೂ ಶೇ. ೧೦೦ ವಸೂಲಾತಿಗೆ ಸಹಕರಿಸಿದ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಾರಂಭದಲ್ಲಿ ಮಾಸ್ಟರ್ ಯತೀಶ್ ಪ್ರಾರ್ಥಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲೋಕೇಶ ಹೆಚ್.ಕೆ. ಸ್ವಾಗತಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಅಶೋಕ ಪಿ.ಎಂ., ನಿರ್ದೇಶಕರುಗಳಾದ ಮೋನಪ್ಪ ಎನ್.ಬಿ., ಪ್ರಸನ್ನ ನೆಕ್ಕಿಲ, ದೀನರಾಜ ದೊಡ್ಡಡ್ಕ, ಪ್ರಮೀಳಾ ಎನ್. ಬಂಗಾರಕೋಡಿ, ದಾಸಪ್ಪ ಮಡಿವಾಳ, ಉದಯಕುಮಾರ ಪಿ.ಎ., ಶೇಷಪ್ಪ ಎನ್.ವಿ., ಜಯರಾಮ ಪಿ.ಟಿ., ಕಿರಣ ಬಂಗಾರಕೋಡಿ, ಆಂತರಿಕ ಲೆಕ್ಕಪರಿಶೋಧಕರಾದ ರತ್ನಾಕರ ಬಳ್ಳಡ್ಕ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ವಿಜಯ ಕೆ.ಎಸ್. ಉಪಸ್ಥಿತರಿದ್ದರು.

ನಿರ್ದೇಶಕ ಪ್ರಸನ್ನ ಎನ್.ಬಿ. ವಂದನಾರ್ಪಣೆಗೈದರು. ರಾಷ್ಟçಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.