ಮಡಿಕೇರಿ, ಸೆ. ೨೦: ಮಡಿಕೇರಿ ನಗರದ ಪುರಾತನ ದೇವಾಲಯಗಳ ಲ್ಲೊಂದಾದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಡಿಕೇರಿಯ ಶೌರ್ಯ ಘಟಕದ ವತಿಯಿಂದ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಮಿತಿಯ ಸದಸ್ಯರು ದೇವಾಲಯದ ಕೆರೆಯ ಆವರಣದಲ್ಲಿದ್ದ ಹುಲ್ಲನ್ನು ಕತ್ತರಿಸಿ ಭಕ್ತಾದಿಗಳ ಕೈ ಕಾಲು ತೊಳೆಯುವ ಸ್ಥಳದಲ್ಲಿ ಶುಚಿಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕಿದರು.
ಕುಡಿಯುವ ನೀರಿನ ಫಿಲ್ಟರ್ ಅನ್ನು ತಂಡದ ಸದಸ್ಯರು ಶುಚಿಗೊಳಿಸಿದರು. ಶೌರ್ಯ ತಂಡದ ಸದಸ್ಯರುಗಳು ಓಂಕಾರೇಶ್ವರ ದೇವಾಲಯದ ಮೆಟ್ಟಿಲುಗಳು ಹಾಗೂ ಆವರಣಕ್ಕೆ ಬ್ಲೀಚಿಂಗ್ ಪೌಡರ್ ಹಾಕಿ ಮೆಟ್ಟಿಲುಗಳು ಹಾಗೂ ದೇವಾಲಯದ ಗ್ರಿಲ್ಗಳನ್ನು ಶುಚಿಗೊಳಿಸಿದರು. ದೇವಾಲಯದ ವತಿಯಿಂದ ಎಲ್ಲ ಸದ್ಯಸರುಗಳಿಗೆ ಊಟ ಹಾಗೂ ಕಾಫಿ ಟೀ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಓಂಕಾರೇಶ್ವರ ದೇವಾಲಯದ ಸಿಬ್ಬಂದಿಗಳಾದ ಭರತ್, ಪುನೀತ್, ಪಂಕಜ, ಹರೀಶ್ ಅವರುಗಳು ಶ್ರಮದಾನದಲ್ಲಿ ಕೈಜೋಡಿಸಿದರು. ಶೌರ್ಯ ತಂಡದ ಸದಸ್ಯರುಗಳಾದ ರೋಹಿಣಿ, ಬಿ.ವಿ. ರವಿಗೌಡ, ಲಿಲ್ಲಿ ಗೌಡ, ಸೈಮನ್, ಕಿರಣ್, ತಾರಾಮಣಿ, ಯಶೋಧ ಹಾಗೂ ಗ್ರಾಮಾಭಿವೃದ್ಧಿ ಸಂಘದ ಸದಸ್ಯರುಗಳಾದ ಫರೀದಾ ಬಾನು, ತಾಜುನಿಸಾ, ಬೇಬಿ, ರಜಿಯಾಭಾನು, ಯಶವಂತ್, ಆಕಾಶ್, ಕಮಲಾಕ್ಷಿ, ಫೌಜಿಯಾ, ಜಯಶ್ರೀ, ನೀತು, ದಿವ್ಯ, ಝಕೀಯಾ ಇತರರು ಪಾಲ್ಗೊಂಡಿದ್ದರು.