ಚೆಯ್ಯಂಡಾಣೆ, ಸೆ. ೧೧: ವೀರಾಜಪೇಟೆಯ ಅನ್ವಾರುಲ್ ಹುದಾ ಸಂಸ್ಥೆಯ ಸಭಾಂಗಣದಲ್ಲಿ ಎಸ್‌ವೈಎಸ್ ವೀರಾಜಪೇಟೆ ಸೆಂಟರ್ ವತಿಯಿಂದ ಅದರ ಅಧೀನದ ಎಲ್ಲ ಬ್ರಾಂಚ್ ಹಾಗೂ ಸೆಂಟರ್ ಸಮಿತಿ ಸದಸ್ಯರಿಗೆ ಸರಣಿ ದಆವಾ ತರಗತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಜಪೇಟೆ ಸೆಂಟರ್ ಅಧ್ಯಕ್ಷ ಅಹ್ಮದ್ ಮದನಿ ಗುಂಡಿಕೆರೆ ವಹಿಸಿದರು. ಕಾರ್ಯಕ್ರಮದಲ್ಲಿ ತರಗತಿಗೆ ನೇತೃತ್ವ ವಹಿಸಿ ಮಾತನಾಡಿದ ಅನ್ವಾರುಲ್ ಹುದಾ ಸಾರಥಿ ಅಶ್ರಫ್ ಅಹ್ಸನಿ ಸಂಘಟನೆ ನಡೆಸಬೇಕಾದ ದಆವಾದ ಬಗ್ಗೆ ಸವಿಸ್ತಾರವಾಗಿ ನೆರದಿದ್ದ ಸದಸ್ಯರಿಗೆ ವಿವರಿಸಿದರು.

ಕಳೆದ ವರ್ಷ ಮೃತಪಟ್ಟ ಜಿಲ್ಲೆಯ ನಾಹಿಬ್ ಖಾಝಿ ಶೈಖುನಾ ಮರ್ಹೂಂ ಮಹ್ಮೂದ್ ಉಸ್ತಾದರ ಹಾಗೂ ಇತ್ತೀಚೆಗೆ ಮರಣ ಹೊಂದಿದ ಝೈನುಲ್ ಅಬಿದೀನ್ ತಂಘಳ್ ರವರ ಅನುಸ್ಮರಣೆಯನ್ನೂ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯ ನೇತೃತ್ವವನ್ನು ಉಮ್ಮರ್ ಬಾಖವಿ ನಡೆಸಿದರು. ಸ್ವಾಗತವನ್ನು ಎಸ್‌ಎಸ್ ಎಫ್ ರಾಷ್ಟಿçÃಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ನಿರ್ವಹಿಸಿದರು.