ಕಣಿವೆ, ಸೆ. ೧೧: ಇಲ್ಲಿನ ಜಂಪ್ಸ್ ಸ್ಮಾಶ್ ಷಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಜಯರಾಜ್ ಹಾಗೂ ರಫೀಕ್ ಗೆಳೆಯರ ಬಳಗ ಗೌರಿ ಗಣೇಶ ಹಬ್ಬದ ಅಂಗವಾಗಿ ಎರಡು ದಿನಗಳ ಕಾಲ ಆಯೋಜಿಸಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸಪ್ತಗಿರಿ ಗಿರೀಶ್ ಮಾಲೀಕತ್ವದ ಟೀಂ ಎಲ್‌ಜೆ ತಂಡ ಮೊದಲ ಬಹುಮಾನ ೩೦ ಸಾವಿರ ರೂ. ಹಾಗೂ ಆಕರ್ಷಕ ಪಾರಿತೋಷಕ ತನ್ನದಾಗಿಸಿ ಕೊಂಡಿತು. ಡಿ.ಎಂ. ಆನಂದ್ ಮಾಲೀಕತ್ವದ ಟೀಂ ರಾಕರ್ಸ್ ತಂಡ ೨೦ ಸಾವಿರ ನಗದು ಬಹುಮಾನ ದೊಂದಿಗೆ ಎರಡನೇ ಬಹುಮಾನಕ್ಕೆ ತೃಪ್ತಿಪಟ್ಟಿತು. ಲೋಹಿತ್ ಮಾಲೀಕತ್ವದ ಡೈಮಂಡ್ ತಂಡ ೧೦ ಸಾವಿರ ನಗದು ಬಹುಮಾನದೊಂದಿಗೆ ಮೂರನೇ ಬಹುಮಾನ ಪಡೆಯಿತು. ಏಳು ಪ್ರಾಂಚೈಸಿಗಳಿದ್ದ ಪಂದ್ಯಾವಳಿಯಲ್ಲಿ ೮೪ ಆಟಗಾರರು ಪಾಲ್ಗೊಂಡಿದ್ದರು. ವಿಜೇತ ತಂಡಗಳಿಗೆ ಕ್ರೀಡಾ ಕೂಟದ ಆಯೋಜಕರಾದ ಜಯರಾಜ್, ರಫೀಕ್, ಅಬು, ರವಿ, ಅರುಣ್, ಹೇಮು, ರಕ್ಷಿತ್, ಪಿಡಿಓ ಲೋಕೇಶ್ ಮತ್ತಿತರರು ಬಹುಮಾನ ವಿತರಿಸಿದರು.