ಮಡಿಕೇರಿ, ಸೆ. ೧೦: ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಮತ್ತು ವೀರಾಜಪೇಟೆಯ ಕಾವೇರಿ ಗಣೇಶೋತ್ಸವ ಸಮಿತಿ ವತಿಯಿಂದ ವೀರಾಜಪೇಟೆಯ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಕವಿಗೋಷ್ಠಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಎಸ್. ಪೂವಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಗೋಷ್ಠಿ ಉದ್ಘಾಟಿಸಿದರು. ಹಿರಿಯ ಕವಿಗಳಾದ ಶೋಭ ಸುಬ್ಬಯ್ಯ, ಕಸ್ತೂರಿ ಗೋವಿಂದಮ್ಮಯ್ಯ, ಎಸ್.ಕೆ. ಈಶ್ವರಿ, ಪಂದ್ಯAಡ ರೇಣುಕಾ ಸೋಮಯ್ಯ, ವಿಮಲ ದಶರಥ, ಪ್ರಿಯಾಂಕಾ ದಶರಥ, ವಿ.ಟಿ. ಶ್ರೀನಿವಾಸ್, ಲವಿನ್ ಡಿಸೋಜ, ಪುಷ್ಪಲತಾ ಶಿವಪ್ಪ ಹಾಗೂ ಸುಳ್ಯದ ಪೆರುಮಾಳ್ ಲಕ್ಷ್ಮಣ್ ಸೇರಿದಂತೆ ಸುಮಾರು ೧೭ ಕವಿಗಳು ಕವನ ವಾಚನ ಮಾಡಿದರು.
ಮುಖ್ಯ ಅತಿಥಿಗಳಾಗಿ ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಿದರು. ಅಂಬೆಕಲ್ಲು ಸುಶೀಲಾ ಕಿರು ರಾಮಾಯಣ ವಾಚನ ಮಾಡಿದರು. ಮನೆ ಮನೆ ಕವಿಗೋಷ್ಠಿ ಪರಿಷತ್ತಿನ ವೈಲೇಶ್ ಪಿ.ಎಸ್. ಪ್ರಾಸ್ತಾವಿಕ ಮಾತ ನಾಡಿದರು. ಕಾವೇರಿ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸೀತಾರಾಮ ರೈ ಹಾಗೂ ಕಾರ್ಯ ದರ್ಶಿಗಳಾದ ವಿ.ಜಿ. ರಾಕೇಶ್ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಪ್ರೀತ ದಿಲೀಪ್ ಪಾರ್ಥಿಸಿದರು. ಭಾಗ್ಯವತಿ ಅಣ್ಣಪ್ಪ ಮತ್ತು ಸಾವಿತ್ರಿ ಹೆಚ್.ಜೆ. ನಿರೂಪಣೆಯಲ್ಲಿ, ಹರೀಶ್ ಕಿಗ್ಗಾಲು ಸ್ವಾಗತಿಸಿ, ವಂದಿಸಿದÀರು.