ಮಡಿಕೇರಿ, ಸೆ.೨: ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಎಲ್ಲ ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿತ್ತು. ಮಡಿಕೇರಿ ನಗರದಲ್ಲಂತೂ ರಸ್ತೆ ಮೇಲೆಯೇ ನೀರು ಹರಿದು ಬಹುತೇಕ ಬಡಾವಣೆಗಳು ಮುಳುಗಡೆ ಗೊಂಡಿದ್ದವು. ಮನೆ, ಅಂಗಡಿ-ಮಳಿಗೆಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು. ಪತ್ರಿಕಾ ಭವನದ ಬಳಿ ಇರುವ ವಿನಾಯಕ ಅಕ್ಕಿ ಗಿರಣಿಗೆ ಮಳೆ ನೀರು ನುಗ್ಗಿದೆ. ಗಿರಣಿಯೊಳಗಡೆ ದಾಸ್ತಾನಿಟ್ಟಿದ್ದ ಗ್ರಾಹಕರಿಗೆ ಸೇರಿದ ಅಕ್ಕಿ ಹಾಗೂ ಭತ್ತದ ಚೀಲಗಳು ನೆನೆದು ಬಹುತೇಕ ಅಕ್ಕಿ ಹಾಗೂ ಭತ್ತ ನಾಶವಾಗಿವೆ.