ಗೋಣಿಕೊಪ್ಪ ವರದಿ, ಆ. ೮: ಕೊಡವ ಕೂಟಾಳಿಯಡ ಕೂಟ ಸಂಘಟನೆ ಆಯೋಜಿಸಿದ್ದ ಕಕ್ಕಡ ಪುದುಮೆ ಆನ್‌ಲೈನ್ ಸ್ಪರ್ಧೆಯಲ್ಲಿ ಚೆನಿಯಪಂಡ ಮನು ಮಂದಣ್ಣ ಪ್ರಥಮ, ಅಣ್ಣಳಮಾಡ ನೀಮಾ ಜೋಯಪ್ಪ ದ್ವಿತೀಯ, ಕುಂಡ್ರAಡ ಪವಿತ ಚೆಂಗಪ್ಪ ತೃತೀಯ ಸ್ಥಾನ, ಪಳಂಗಿಯAಡ ಆರತಿ ಮೆಚ್ಚುಗೆ ಬಹುಮಾನ ಪಡೆದುಕೊಂಡರು.

ಕಕ್ಕಡ ತಿಂಗಳಿನ ಮಳೆಯ ಅಬ್ಬರದ ಪರಿಸ್ಥಿತಿ, ಆಹಾರ ಪದ್ಧತಿ, ಗದ್ದೆ ಕೆಲಸ, ನಾಟಿ ಔಷಧಿ, ಕಕ್ಕಡ ತಿಂಗಳಿನಲ್ಲಿ ಯಾವ ಕಾರ್ಯಗಳು ಯಾಕೆ ಮಾಡಬಾರದು ಎಂಬ ಜ್ಞಾನವನ್ನು ವಿಡಿಯೋದೊಂದಿಗೆ ಯುವ ಪೀಳಿಗೆಗೆ ಸ್ಪರ್ಧೆ ಮೂಲಕ ಅರಿವು ಮೂಡಿಸಲಾಯಿತು.

ಕಲಾವಿದ ಮಾದೇಟಿರ ಬೆಳ್ಯಪ್ಪ, ಲೇಖಕ ಕೋಟೆರ ಪೂಣಚ್ಚ ತೀರ್ಪು ಗಾರರಾಗಿ ಕಾರ್ಯ ನಿರ್ವಹಿಸಿದರು. ಪಳಂಗಿಯAಡ ದರ್ಶನ್ ಮುತ್ತಪ್ಪ, ಕಾಳೇಂಗಡ ಸಾವಿತ್ರಿ ಮುತ್ತಪ್ಪ ಬಹುಮಾನ ನೀಡಿದರು.