ಮಡಿಕೇರಿ, ಜು. ೨೫: ಸಿ.ಬಿ.ಎಸ್.ಸಿ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕೆ.ವಿ.ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಸ್ಥಾನ ಪಡೆದ ಶೇಖರ್ ಮತ್ತು ಪದ್ಮಿನಿ ದಂಪತಿಗಳ ಪುತ್ರ ಪ್ರಥಮ್ ಶೇಖರ್ ಮತ್ತು ದ್ವಿತೀಯ ಸ್ಥಾನ ಪಡೆದ ಧರ್ಮಪಾಲ ಮತ್ತು ಲತಾ ದಂಪತಿಗಳ ಪುತ್ರಿ ಮೋಕ್ಷಿತಾ ಕೆ.ಇವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಅವರು ಅಭಿನಂದಿಸಿ ವಿದ್ಯಾರ್ಥಿಗಳಿಗೆ ರೂ. ೫೦೦೦ ಪ್ರೋತ್ಸಾಹಧನ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಪ್ರಾಂಶುಪಾಲ ಅರುಣ್‌ಕುಮಾರ್, ಶೈಕ್ಷಣಿಕ ಸಂಯೋಜನಾಧಿಕಾರಿ ಸುಜಾತ ಕಲ್ಲಾಜೆ, ಶಿಕ್ಷಕರಾದ ಪಲ್ಲವಿ, ಸುಜಿತ್, ಆಡಳಿತಾಧಿಕಾರಿ ತೃಪ್ತಿ ಗುತ್ತುಗದ್ದೆ ಮತ್ತು ಎ.ಒ.ಎಲ್.ಇ ಕಚೇರಿಯ ಆಡಳಿತಾಧಿಕಾರಿ ಪ್ರಸನ್ನಕುಮಾರ್ ಕಲ್ಲಾಜೆ ಉಪಸ್ಥಿತರಿದ್ದರು. ೧೦ನೇ ತರಗತಿಯಲ್ಲಿ ಸತತ ೯ನೇ ಬಾರಿ ಶೇ.೧೦೦ ಫಲಿತಾಂಶ ದಾಖಲಿಸಲು ಕಾರಣರಾದ ಶಾಲೆಯ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.