ಮಡಿಕೇರಿ, ಜು. ೨೪: ವೀರಾಜ ಪೇಟೆ ವಿಧಾನಸಭಾ ಕ್ಷೇತ್ರದ ೯ ಮಂದಿ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಎಲೆಕ್ಟಿçÃಷಿಯನ್ ಟೂಲ್ಕಿಟ್ ಅನ್ನು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ. ಬೋಪಯ್ಯ ಅವರು ವಿತರಿಸಿದರು.
ಎಲೆಕ್ಟಿçÃಷಿಯನ್ ಟೂಲ್ಕಿಟ್ನಲ್ಲಿ ಡ್ರಿಲ್ಲಿಂಗ್ ಯಂತ್ರ, ಡ್ರಿಲ್ ಬಿಟ್ಗಳು, ಮರದ ಡ್ರಿಲ್ ಬಿಟ್ಗಳು, ತಿರುಪು ಮೊಳೆಗಳು, ವಾಲ್ ಪ್ಲಗ್ಗಳು, ಸ್ಕೂçಡ್ರೆöÊವರ್ಗಳು, ಕಾಂಕ್ರೀಟ್ ಡ್ರಿಲ್ ಬಿಟ್ಗಳು, ಡಿಜಿಟಲ್ ಮಲ್ಟಿ ಮೀಟರ್, ಟೇಪ್, ಸ್ಲೆöÊಡಿಂಗ್ ನೈಫ್, ಸುತ್ತಿಗೆ, ವೈರ್ ಕಟ್ಟರ್ಗಳು ಮತ್ತು ಟೂಲ್ಕಿಟ್ ಬ್ಯಾಗ್ ಅನ್ನು ೯ ಮಂದಿ ಎಲೆಕ್ಟಿçÃಷಿಯನ್ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಮಡಿಕೇರಿ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎA. ಯತ್ನಟ್ಟಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಶ್ರೀ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕೋಡಿ ಪೊನ್ನಪ್ಪ, ಕಾರ್ಮಿಕ ಇಲಾಖೆಯ ಡಿ.ಒ. ಜರೀನಾ. ಪ್ರಸನ್ನ, ರಕ್ಷಿತ್ ಇತರರು ಇದ್ದರು.