ಕುಶಾಲನಗರ, ಜೂ. ೧೩: ಹುಣ್ಣಿಮೆ ಅಂಗವಾಗಿ ಜೀವನದಿ ಕಾವೇರಿಗೆ ತಾ.೧೪ ರಂದು (ಇಂದು) ೧೩೨ನೇ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಸಂಜೆ ೫.೩೦ಕ್ಕೆ ಸ್ಥಳೀಯ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ನದಿಗೆ ಆರತಿ ನಡೆಯಲಿದೆ.