ಮಡಿಕೇರಿ, ಏ. ೧೧: ಆನ್ ಲೈನ್ ವಂಚನಾ ಜಾಲದ ಲಿಂಕ್ ಅನ್ನು ಒತ್ತಿ ಯುವಕನೋರ್ವ ರೂ. ೩೮ ಸಾವಿರ ಕಳೆದುಕೊಂಡಿರುವ ಘಟನೆ ನಡೆದಿದೆ. ಆನ್ ಲೈನ್ ವಂಚಕರು ಕಳುಹಿಸಿದ ಲಿಂಕ್ ಮೇಲೆ ಒತ್ತಿ ಹಣ ಕಳೆದುಕೊಂಡ ಯುವಕ ಇದೀಗ ತಲೆ ಮೇಲೆ ಕೈ ಇಟ್ಟುಕೊಂಡಿದ್ದಾನೆ.

ಸುಂಟಿಕೊಪ್ಪ ೨ನೇ ವಿಭಾಗದ ಸಮೀರ್ (ಕಿಣ್ಣುಸ್) ಎಂಬಾತ ಆ್ಯಪ್ ಒಂದರಲ್ಲಿ ರೂ. ೩೮ ಸಾವಿರ ಮೌಲ್ಯದ ಮೊಬೈಲ್ ಅನ್ನು ಇಎಂಐ ಮೂಲಕ ಸಾಲವಾಗಿ ಖರೀದಿಸಿದ್ದ. ತಿಂಗಳ ಇಎಂಐ ಅನ್ನು ನಿಯಮಿತವಾಗಿ ಪಾವತಿಸಿಕೊಂಡು ಬಂದಿದ್ದಾನೆ. ಅದೇ ರೀತಿ ತಾ. ೪ ರಂದು ಈ ತಿಂಗಳ ಇಎಂಐ ರೂ.೩೧೦೦ ಹಣ ಈತನ ಖಾತೆಯಿಂದ ಪಾವತಿಯಾಗಿದೆ. ಆದರೆ ತಾ. ೭ ರಂದು ಪುನಃ ಖಾತೆಯಿಂದ ಇಎಂಐ ಹಣ ಜಮೆಯಾಗಿದೆ. ಇದರಿಂದ ವಿಚಲಿತರಾದ ಸಮೀರ್ ವಿಚಾರಿಸಲೆಂದು ಮನಿ ಕಂಪನಿಯ ಕಸ್ಟಮರ್ ಕೇರ್‌ಗೆ ಹಲವು ಸಲ ಕರೆ ಮಾಡಿದ್ದಾನೆೆ. ಆದರೆ ಆ ನಂಬರ್ ದೀರ್ಘ ಕಾಲ ಬ್ಯುಸಿ ಆಗಿಯೇ ಇದ್ದುದರಿಂದ ಕಾಲ್ ರಿಸೀವ್ ಆಗಲಿಲ್ಲ. ಹೀಗಾಗಿ ಸಮೀರ್ ಗೂಗಲ್‌ನಲ್ಲಿ ಹುಡುಕಿದಾಗ ಈ ಲೋನ್ ಕಂಪನಿಯ ವೆಬ್ (ಫೇಕ್) ಸೈಟ್ ಕಣ್ಣಿಗೆ ಬಿದ್ದಿದೆ. ಅದರಲ್ಲಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದಾಗ ಅತ್ತಲಿನವರು ಕರೆ ಸ್ವೀಕರಿಸಿರಲಿಲ್ಲ. ಇದಾದ ಸ್ವಲ್ಪ ಹೊತ್ತಿನ ನಂತರ ಬೇರೊಂದು ನಂಬರ್‌ನಿAದ ಸಮೀರ್‌ಗೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ತಾನು ಲೋನ್ ಕಂಪನಿಯ ಕಸ್ಟಮರ್ ಕೇರ್ ನವನೆಂದು ಹೇಳಿಕೊಂಡಿದ್ದಾನೆ. ಅವನ ಮಾತನ್ನು ನಂಬಿದ ಸಮೀರ್ ತಿಂಗಳಲ್ಲಿ ಎರಡು ಸಲ ಇಎಂಐ ಪಾವತಿಸಿಕೊಂಡಿರುವುದನ್ನು ವಿವರಿಸಿದ್ದಾರೆ. ಅತ್ತಲಿಂದ ಕರೆ ಮಾಡಿದಾತ "ನಿಮಗೆ ಇನ್ನೊಂದು ನಂಬರ್‌ನಿAದ ಕಾಲ್ ಬರುತ್ತೆ. ಅವರು ನಿಮ್ಮ ಪ್ರಾಬ್ಲಮ್ ಸಾಲ್ವ್ ಮಾಡ್ತಾರೆ" ಎಂದು ಹೇಳಿ ಕಾಲ್ ಕಟ್ ಮಾಡಿದ್ದಾನೆ.

ನಂತರ ಮತ್ತೊಂದು ನಂಬರ್‌ನಿAದ ಕರೆ ಬಂದಿದೆ. ಕರೆ ಮಾಡಿದಾತ ಮೊಬೈಲ್ ನಲ್ಲಿ ‘ಎನಿ ಡೆಸ್ಕ್ ಆ್ಯಪ್’ ಇನ್ಸಾ÷್ಟಲ್ ಮಾಡಲು ಸಮೀರ್‌ಗೆ ತಿಳಿಸಿದ್ದಾನೆ. ಆದರೆ ಈ ಆ್ಯಪ್ ಇನ್ಸಾ÷್ಟಲ್ ಆಗುತ್ತಿಲ್ಲ ಎಂದು ಸಮೀರ್ ಹೇಳಿದ್ದಾನೆ. ಹೀಗಾಗಿ ಕರೆ ಮಾಡಿದಾತ ಲಿಂಕ್ ವೊಂದನ್ನು ಕಳುಹಿಸುತ್ತೇನೆ. ಅದನ್ನು ಒತ್ತುವಂತೆಯೂ ಮತ್ತು ಲಿಂಕ್ ಓಪನ್ ಆದ ನಂತರ ಅದರಲ್ಲಿ ಲೋನ್ ಆ್ಯಪ್ ಹಾಗೂ ಪ್ರೊಫೈಲ್ ಓಪನ್ ಮಾಡಲು ಹೇಳಿದ್ದಾರೆÉ. ನಂತರ ಆತ ಕಳುಹಿಸಿದ ಲಿಂಕ್ ಅನ್ನು ಸಮೀರ್ ಒತ್ತಿದ್ದಾರೆ. ಆತ ಹೇಳಿದಂತೆ ಆ ಲಿಂಕ್‌ನಲ್ಲಿ ಲೋನ್ ಆ್ಯಪ್ ಮತ್ತು ಪ್ರೊಫೈಲ್ ಓಪನ್ ಮಾಡಿದ್ದಾರೆ. ಈ ಸಂದರ್ಭ ಸಮೀರ್‌ನ ಮೊಬೈಲ್ ಅನ್ನು ಕಂಪ್ಲೀಟ್ ಆಗಿ ಅತ್ತ ಕಡೆಯಿಂದ ಕಾಲ್ ಮಾಡಿದ್ದ ಖದೀಮ ಹ್ಯಾಕ್ ಮಾಡಿದ್ದಾನೆ. ನೋಡ ನೋಡುತ್ತಿದ್ದಂತೆಯೇ ಸಮೀರ್ ಖಾತೆಯಿಂದ ಒಟ್ಟು ರೂ.೩೮,೦೦೦ ನಾಪತ್ತೆಯಾಗಿದೆ. ಖಾತೆಯಲ್ಲಿದ್ದ ಹಣವೆಲ್ಲಾ ಹ್ಯಾಕರ್‌ನ ಪಾಲಾಗುತ್ತಿದ್ದಂತೆಯೇ ಅತ್ತ ಕಡೆಯಿಂದ ಬಂದಿದ್ದ ಕಾಲ್ ಕೂಡ ಕಟ್ ಆಗಿದೆ.

ಇದರಿಂದ ತಾನು ಮೋಸ ಹೋಗಿರುವುದನ್ನು ಅರಿತ ಸಮೀರ್ ಬ್ಯಾಂಕ್‌ಗೆ ತೆರಳಿ ವಿಷಯ ತಿಳಿಸಿ ಸೈಬರ್ ಕ್ರೆöÊಂ ಪೊಲೀಸ್‌ಗೆ ಪುಕಾರು ನೀಡಿದ್ದಾರೆ. ಇತ್ತ ಫೇಕ್ ಲಿಂಕ್ ನಿಂದಾಗಿ ಹಣ ಕಳೆದುಕೊಂಡಿರುವ ಸಮೀರ್ ತಲೆ ಮೇಲೆ ಕೈ ಹೊತ್ತು ಕುಳಿತಿದ್ದು, ತನ್ನಂತೆ ಬೇರೆಯವರು ಮೋಸ ಹೋಗದಂತೆ ಎಚ್ಚರ ವಹಿಸುವಂತೆ ಕೇಳಿಕೊಂಡಿದ್ದಾರೆ.

-ಕ್ಯೂಟ್ ಕೂರ್ಗ್ ನ್ಯೂಸ್