ಕೂಡಿಗೆ, ಮಾ. ೨೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳು ರೈತರ ಜಮೀನಿಗೆೆ ದಾಳಿ ಮಾಡಿ ಬಾಳೆ, ಕೇನೆ, ಸಿಹಿ ಗೆಣಸು, ಬೇಸಿಗೆ ಬೆಳೆಯಾದ ಮೆಕ್ಕೆಜೋಳ ಅಡಿಕೆ ಹೊಸದಾಗಿ ಮಾಡಿದ ತೋಟಗಳನ್ನು ತುಳಿದು ತಿಂದು ನಷ್ಟ ಪಡಿಸಿವೆ.

ಸೀಗೆಹೊಸೂರು ಗ್ರಾಮದ ಕುಶಾಲಪ್ಪ, ಶಂಕರ, ಲಕ್ಷಿö್ಮ ಚಂದ್ರಶೇಖರ, ಚಂದ್ರಪ್ಪ, ಅರುಣ್, ಜಯಶೀಲಾ, ಸೇರಿದಂತೆ ಗ್ರಾಮ ವ್ಯಾಪ್ತಿಯ ಅನೇಕ ರೈತರ ಜಮೀನಿಗೆ ಎಂಟಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ಮಾಡಿ ಜಮೀನಿನ ನೀರಿನ ವ್ಯವಸ್ಥೆಗೆ ಅಳವಡಿಸಿದ್ದ ಪೈಪ್‌ಗಳನ್ನು ಸಂಪೂರ್ಣವಾಗಿ ತುಳಿದು ನಷ್ಟಪಡಿಸಿವೆ.

ಹೆಬ್ಬಾಲೆ ಉಪ ವಲಯ ಅರಣ್ಯ ಸಹಾಯಕ ಅರಣ್ಯ ಅಧಿಕಾರಿ ಲೋಕೇಶ್ ಮತ್ತು ಸಿಬ್ಬಂದಿ ವರ್ಗದವರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ.