ಮಡಿಕೇರಿ, ಮಾ. ೨೦: ಕರ್ನಾಟಕ ಸರಕಾರ ಹಾಗೂ ಸಹಕಾರ ಮಹಾಮಂಡಳದ ವತಿಯಿಂದ ನೀಡಲಾಗುವ ‘ಸಹಕಾರ ರತ್ನ’ ಪ್ರಶಸ್ತಿಯನ್ನು ಜಿಲ್ಲೆಯ ಈರ್ವರು ಪಡೆದುಕೊಂಡರು. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾಗಿರುವ ಕೊಡಂದೇರ ಬಾಂಡ್ ಗಣಪತಿ ಅವರೊಂದಿಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರೂ ಆಗಿರುವ ಮುದ್ದಂಡ ಬಿ. ದೇವಯ್ಯ ಅವರುಗಳಿಗೆ ಬೆಂಗಳೂರಿನಲ್ಲಿ ಕೆಂಗೇರಿ ಉಪನಗರದ ಗಣೇಶ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.