ಹಿಜಾಬ್ ಸಂಬAಧ ಪ್ರಕರಣ ವಾರದೊಳಗೆ ಮುಗಿಸುವ ಇಂಗಿತ
ಬೆAಗಳೂರು, ಫೆ. ೨೨: ಹಿಜಾಬ್ ಸಂಬAಧಿತ ಪ್ರಕರಣವನ್ನು ಈ ವಾರವೇ ವಿಲೇವಾರಿ ಮಾಡಲು ಬಯಸುವುದಾಗಿ ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದೆ. ಕರ್ನಾಟಕದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಹಿಜಾಬ್ ವಿವಾದ ಸಂಬAಧ ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಇದೇ ವಾರಾಂತ್ಯದೊಳಗೆ ಮುಕ್ತಾಯಗೊಳಿಸಲು ಹೈಕೋರ್ಟ್ ಬಯಸಿದೆ. ಈ ಸಂಬAಧ ಇಂದು ನಡೆಸಿದ ವಿಚಾರಣೆಯಲ್ಲಿ ಉಚ್ಚ ನ್ಯಾಯಾಲಯ ಹಿಜಾಬ್ ಸಂಬAಧಿತ ಪ್ರಕರಣವನ್ನು ತ್ವರಿತವಾಗಿ ವಿಲೇವಾರಿ ಮಾಡಲು ಎಲ್ಲಾ ಪಕ್ಷಗಳ ಸಹಕಾರವನ್ನು ಕೋರಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಜೆ.ಎಂ. ಖಾಜಿ ಮತ್ತು ಕೃಷ್ಣ ಎಂ. ದೀಕ್ಷಿತ್ ಅವರ ಪೂರ್ಣ ಪೀಠವು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣವನ್ನು ಈ ವಾರವೇ ಮುಗಿಸಲು ನಾವು ಬಯಸುತ್ತೇವೆ, ಈ ವಾರದ ಅಂತ್ಯದೊಳಗೆ ಈ ಪ್ರಕರಣವನ್ನು ಮುಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ನ್ಯಾಯಾಲಯದ ಕಲಾಪಗಳು ಪ್ರಾರಂಭವಾದ ತಕ್ಷಣ, ಅರ್ಜಿದಾರ ಬಾಲಕಿಯರ ಪರ ಹಾಜರಾದ ವಕೀಲರು ಕರ್ನಾಟಕ ಹೈಕೋರ್ಟ್ನ ಪೂರ್ಣ ಪೀಠಕ್ಕೆ ಹಿಜಾಬ್ನೊಂದಿಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಕಾಣಿಸಿಕೊಳ್ಳಲು ಬಯಸುವ ಮುಸ್ಲಿಂ ಹುಡುಗಿಯರಿಗೆ ಸ್ವಲ್ಪ ಸಡಿಲಿಕೆಯನ್ನು ಕೋರಿದರು. ಇನ್ನು ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಅವರು, ಆರ್ಟಿಕಲ್ ೧೯(೧)(ಎ) ಅಡಿಯಲ್ಲಿ, ನಮ್ಮ ದೇಶದಲ್ಲಿ ಹಿಜಾಬ್ ಧರಿಸಲು ಯಾವುದೇ ನಿಷೇಧವಿಲ್ಲ. ಆದರೆ ಶಾಲೆಗಳು, ಆಸ್ಪತ್ರೆ, ಮಿಲಿಟರಿ ಪ್ರದೇಶಗಳಂತಹ ಸಾಂಸ್ಥಿಕ ವಿಭಾಗಗಳಲ್ಲಿ ೧೯(೨) ಅಡಿಯಲ್ಲಿ ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ವಾದಿಸಿದ್ದಾರೆ. ಸಂಸ್ಥೆಗಳ ಒಳಗೆ ಯಾವುದೇ ನಿರ್ಬಂಧಗಳಿಲ್ಲ ಮತ್ತು ಅದು ವರ್ಗದೊಳಗೆ ಮಾತ್ರ. ಯಾವುದೇ ಸಂಸ್ಥೆಯು ಸಮುದಾಯ, ಧರ್ಮ ಇತ್ಯಾದಿಗಳನ್ನು ಲೆಕ್ಕಿಸದೆ ತರಗತಿಯಲ್ಲಿ ಸಮವಸ್ತçವನ್ನು ಮೀರಿ ಬೇರೇನನ್ನೂ ಧರಿಸುವಂತಿಲ್ಲ ಎಂದು ಎಜಿ ಹೈಕೋರ್ಟ್ಗೆ ತಿಳಿಸಿದರು. ಮಹಿಳೆಯರನ್ನು ವಸ್ತçದ ಬಲವಂತಕ್ಕೆ ಒಳಪಡಿಸುವಂತಿಲ್ಲ. ಅರ್ಜಿಯ ಸಂಪೂರ್ಣ ಚೌಕಟ್ಟು ಕಡ್ಡಾಯವಾಗಿದೆ. ಎಲ್ಲಿಯೂ ನಿಷೇಧವಿಲ್ಲ. ಆದರೆ ಕಡ್ಡಾಯವಲ್ಲ, ವಸ್ತç ಧರಿಸುವ ಅಥವಾ ಧರಿಸದೇ ಇರುವ ನಿರ್ಧಾರವನ್ನು ಸಂಬAಧಪಟ್ಟ ಮಹಿಳೆಯರ ವಿವೇಚನೆಗೆ ಬಿಡಲಾಗುವುದು. ಮಹಿಳೆಯರ ಘನತೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. ಉಭಯ ವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು ಬುಧವಾರಕ್ಕೆ ಮಧ್ಯಾಹ್ನ ೨.೩೦ಕ್ಕೆ ಮುಂದೂಡಿತು.
ಈಶ್ವರಪ್ಪ ವಜಾಕ್ಕೆ ಆಗ್ರಹ-ರಾಜ್ಯಪಾಲರಿಗೆ ದೂರು
ಬೆಂಗಳೂರು, ಫೆ. ೨೨: ದುರುದ್ದೇಶದಿಂದಲೇ ಸಚಿವ ಕೆ.ಎಸ್. ಈಶ್ವರಪ್ಪ ರಾಷ್ಟçಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ನಿಯೋಗ ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ. ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇಂದು ರಾಜ್ಯಪಾಲರ ಭೇಟಿ ಮಾಡಿದೆವು. ಪಾದಯಾತ್ರೆಯಲ್ಲಿ ನಿಯೋಗದ ಜೊತೆ ಬಂದು ಮನವಿ ಸಲ್ಲಿಸಿದ್ದೇವೆ. ಫೆಬ್ರವರಿ ೯ ರಂದು ಬಿಜೆಪಿಯ ಹಿರಿಯ ಸಚಿವ ಈಶ್ವರಪ್ಪ ಉದ್ದೇಶಪೂರ್ವಕವಾಗಿ ಕೇಸರಿ ಧ್ವಜವನ್ನು ಕೆಂಪು ಕೋಟೆ ಮೇಲೆ ಇವತ್ತಲ್ಲ ನಾಳೆ ಹಾರಿಸ್ತೇವೆ ಎಂದಿದ್ದರು. ರಾಷ್ಟçಧ್ವಜ ಹಾರಾಡುವ ಕೆಂಪುಕೋಟೆ ಮೇಲೆ ಕೇಸರಿ ಧ್ಚಜ ಹಾರಿಸುತ್ತೇವೆ ಎಂದು ನೀಡಿರುವ ಹೇಳಿಕೆ ಧ್ವಜಕ್ಕೆ ಮಾಡಿದ ಅವಮಾನ ಎಂದರು.
ಹರ್ಷ ಹತ್ಯೆ ಪ್ರಕರಣ - ಮತ್ತೆ ಇಬ್ಬರ ಬಂಧನ
ಶಿವಮೊಗ್ಗ, ಫೆ. ೨೨: ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಇದರೊಂದಿಗೆ ಪ್ರಕರಣ ಸಂಬAಧ ಬಂಧನಕ್ಕೊಳಗಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಪ್ರಕರಣ ಸಂಬAಧ ಪೊಲೀಸರು ಈ ಹಿಂದೆ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಮತ್ತೆ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರಿಬ್ಬರೂ ಶಿವಮೊಗ್ಗ ಮೂಲದವರಾಗಿದ್ದು, ೧೨ ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.
ನ್ಯಾಯಾಂಗ ನಿಂದನೆ ಪ್ರಕರಣ - ನಟ ಚೇತನ್ ಪೊಲೀಸ್ ವಶಕ್ಕೆ
ಬೆಂಗಳೂರು, ಫೆ. ೨೨: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬAಧಿಸಿದAತೆ ನಟ ಚೇತನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಟ ಚೇತನ್ ಅವರ ಪತ್ನಿ ಮೇಘಾ ಅವರು ಮಾಹಿತಿ ನೀಡಿದ್ದು, ನಟ ಚೇತನ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಇದೊಂದು ಅಪಹರಣ. ಮಧ್ಯಾಹ್ನ ೩ ಗಂಟೆಗೆ ಚೇತನ್ ಅವರನ್ನು ಮನೆಯಿಂದ ವಶಕ್ಕೆ ಪಡೆದಿರುವ ಪೊಲೀಸರು, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಪತಿ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪತಿಗಾಗಿ ಮೇಘಾ ಅವರು ಶೇಷಾದ್ರಿಪುರ ಠಾಣೆಗೆ ಧಾವಿಸಿ ಬಂದಿದ್ದು, ಆದರೆ, ಚೇತನ್ ಶೇಷಾದ್ರಿಪುರ ಠಾಣೆಯಲ್ಲಿಲ್ಲ ಎಂಬ ಮಾಹಿತಿ ಅವರಿಗೆ ಗೊತ್ತಾಗಿದೆ. ಹೀಗಾಗಿ ಘಟನೆ ಬಗ್ಗೆ ವೀಡಿಯೋ ಹರಿಬಿಟ್ಟಿರುವ ಮೇಘನಾ, ಪೊಲೀಸರೆಂದು ಹೇಳಿಕೊಂಡು ಮನೆಗೆ ಬಂದಿದ್ದ ಕೆಲವರು, ಚೇತನ್ ಅವರನ್ನು ಕರೆದೊಯ್ದಿದ್ದಾರೆ. ಅವರು ಈಗ ಎಲ್ಲಿದ್ದಾರೆಂಬುದನ್ನು ಯಾರೂ ಹೇಳುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಪೊಲೀಸ್ ಅಧಿಕಾರಿಯೊಬ್ಬರು, ‘ಅತ್ಯಾಚಾರ ಪ್ರಕರಣವೊಂದರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಜಾಮೀನು ಮಂಜೂರು ಮಾಡಿದ್ದರು. ಇದೇ ವಿಷಯ ಪ್ರಸ್ತಾಪಿಸಿ ಚೇತನ್ ಅವರು ನ್ಯಾಯಾಂಗ ನಿಂದನೆ ಮಾಡಿರುವ ಆರೋಪವಿದೆ. ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೇಘಾ ತಿಳಿಸಿದ್ದಾರೆ.